ಚಾರ್ಮಾಡಿ ಘಾಟ್ ನಲ್ಲಿ ಕೃತಕ ಜಲಪಾತ ಮತ್ತು ಇಬ್ಬನಿ ಸೃಷ್ಟಿಸಿರುವ ದೃಶ್ಯವೈಭವವನ್ನು ಒಬ್ಬ ಕವಿಯೇ ಚೆನ್ನಾಗಿ ಬಣ್ಣಿಸಬಲ್ಲ

ಚಾರ್ಮಾಡಿ ಘಾಟ್ ನಲ್ಲಿ ಕೃತಕ ಜಲಪಾತ ಮತ್ತು ಇಬ್ಬನಿ ಸೃಷ್ಟಿಸಿರುವ ದೃಶ್ಯವೈಭವವನ್ನು ಒಬ್ಬ ಕವಿಯೇ ಚೆನ್ನಾಗಿ ಬಣ್ಣಿಸಬಲ್ಲ
|

Updated on:Jul 10, 2024 | 11:32 AM

ಕೃತಕ ಜಲಪಾತಗಳಿಂದ ನೀರು ರಸ್ತೆ ಪಕ್ಕದಲ್ಲಿನ ಕಾಲುವೆಗಳಿಗೆ ಬೀಳುತ್ತಿದೆ. ಕಾಲುವೆಗಳು ಮಾನವ ನಿರ್ಮಿತವೋ ಅಥವಾ ರಭಸದಿಂದ ಬೀಳುವ ನೀರು ಸೃಷ್ಟಿ ಮಾಡಿರುವ ತಗ್ಗು ಪ್ರದೇಶಗಳೋ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ನೀರು ರಸ್ತೆಗೆ ಬರುತ್ತಿಲ್ಲ ಅನ್ನೋದೇ ಸಮಾಧಾನಕರ ಸಂಗತಿ. ನಿಮ್ಮಲ್ಲಿರುವ ಕವಿಯನ್ನು ಜಾಗೃತಗೊಳಿಸಲು ಇಲ್ಲಿಗೊಮ್ಮೆ ಬಂದು ಹೋಗಿ.

ಚಿಕ್ಕಮಗಳೂರು: ಬೆಚ್ಚನೆಯ ಮನೆ ಇರಲು ವೆಚ್ಚಕೆ ಹೊನ್ನಿರಲು ಇಚ್ಛೆಯನ್ನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದು ಹೇಳಿದ ಸರ್ವಜ್ಞರು ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಂದಿದ್ದರೆ ಇಲ್ಲೂ ಒಂದು ಸ್ವರ್ಗವಿದೆ ಅನ್ನುತ್ತಿದ್ದರೇನೋ? ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಚಾರ್ಮಾಡಿ ಗುಡ್ಡಗಾಡು ಪ್ರದೇಶದಲ್ಲಿ ಕೃತಕ ಜಲಪಾತಗಳು ಸೃಷ್ಟಿಯಾಗಿವೆ. ಘಾಟ್ ಪ್ರದೇಶದಲ್ಲಿ ಅವುಗಳಿಂದಾಗಿ ನಿರ್ಮಾಣಗೊಂಡಿರುವ ದೃಶ್ಯವೈಭವನ್ನು ನೋಡಲು ಎರಡು ಕಣ್ಣು ಸಾಲವು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು ಮಾರಾಯ್ರೇ. ನೂರು ಕಣ್ಣು ಸಾಲದು ನಾ ನಿನ್ನ ನೋಡಲು, ನೂರಾರು ಮಾತು ಸಾಲದು ಅಂದ ಬಣ್ಣಿಸಲು ಅಂತ ರಾಜಾ ನನ್ನ ರಾಜಾ ಚಿತ್ರದಲ್ಲಿ ನಾವೆಯೊಂದರಲ್ಲಿ ಕುಳಿತು ಚಂದ್ರಶೇಖರ್ ಚಿತ್ರದ ನಾಯಕಿ ಆರತಿಯವರನ್ನು ನೋಡುತ್ತ ಹಾಡಿರಬಹುದು. ಅದರೆ ನೀವೀಗ ಚಾರ್ಮಾಡಿ ಘಾಟ್ ಗೆ ಬಂದರೆ ನಿಮ್ಮ ಮನಸ್ಸಿನಲ್ಲಿ ಆ ಹಾಡಿನ ಸಾಲುಗಳು ಮೂಡಿದರೆ ಆಶ್ಚರ್ಯವಿಲ್ಲ. ಹಾಲಿನ ನೊರೆಯಂತೆ ಕಾಣುವ ಹರಿಯುವ ನೀರು ನಯನ ಮನೋಹರ ಮತ್ತು ಅರಸಿಕನನ್ನೂ ಕವಿಯಾಗಿಸುವ ದೃಶ್ಯಕಾವ್ಯ. ಇಲ್ಲಿ ಕಾಣುವ ಸೌಂದರ್ಯಕ್ಕೆ ಅನುರೂಪವೆನಿಸುವ ಬೇರೆ ಹಾಡುಗಳನ್ನೂ ನೀವು ಕಲ್ಪಿಸಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಜಲಪಾತದ ಬಳಿ ಚೆಲ್ಲಾಟವಾಡುತ್ತಿದ್ದ ಯುವಕರ ಬಟ್ಟೆ ಎತ್ಹಾಕಿಕೊಂಡು ಬಂದ ಪೊಲೀಸರು!

Published On - 11:32 am, Wed, 10 July 24

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ