ಸರ್ಕಾರ ಉರುಳಿಸುವ ಶಕ್ತಿಯಿರುವುದು ನಮ್ಮಣ್ಣಂಗೆ ಮಾತ್ರ: ರಮೇಶ್​ ಜಾರಕಿಹೊಳಿ ಕಾಲೆಳೆದ ಸತೀಶ್​ ಜಾರಕಿಹೊಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 24, 2022 | 9:29 PM

ಜಾರಕಿಹೊಳಿ ಸೋದರರಿಗೆ ಸರ್ಕಾರ ಬದಲಿಸೋ ಶಕ್ತಿ ಇದೆ ಅಂತಾರೆ. ರಾಜ್ಯ ರಾಜಕಾರಣದಲ್ಲಿ ನಾವು ನಾಲ್ವರು ಸಹೋದರರು ಇದ್ದೇವೆ.

ಬೆಳಗಾವಿ: ರಮೇಶ್​​ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರುಳಿಸುವ ಶಕ್ತಿ ಇದೆ ಎಂದು ರಮೇಶ್​ ಜಾರಕಿಹೊಳಿ ಕಾಲೆಳೆದ ಸೋದರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ. ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸತೀಶ್ ಭಾಷಣ ಮಾಡಿದರು. ಸಮಾರಂಭದಲ್ಲಿ ಜಾರಕಿಹೊಳಿ ಸಹೋದರರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ ಎಂದು ಭಾಷಣ ಮಾಡಿದ್ದ ಕೆಲವರು. ಇದಕ್ಕೆ ವೇದಿಕೆಯಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಉತ್ತರಿಸಿದ್ದು, ಜಾರಕಿಹೊಳಿ ಸೋದರರಿಗೆ ಸರ್ಕಾರ ಬದಲಿಸೋ ಶಕ್ತಿ ಇದೆ ಅಂತಾರೆ. ರಾಜ್ಯ ರಾಜಕಾರಣದಲ್ಲಿ ನಾವು ನಾಲ್ವರು ಸಹೋದರರು ಇದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ನಾಲ್ವರು ಸಹೋದರರ ಕೆಲಸವೂ ಬೇರೆ ಇದೆ, ಕನ್​​ಫ್ಯೂಸ್ ಆಗಬೇಡಿ. ರಮೇಶ್​ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರುಳಿಸುವ ಶಕ್ತಿ ಇದೆ. ಉಳಿದ ಸಹೋದರರು ಸರ್ಕಾರ ಪತನದ ಭಾಗವಾಗುವುದಿಲ್ಲ. ಮತ್ತೆ ಸರ್ಕಾರ ಉರುಳಿಸುವ ಪಯತ್ನ ಮಾಡಲೆಂದು ಪ್ರಾರ್ಥಿಸೋಣ ಎಂದು ಸತೀಶ್ ಜಾರಕಿಹೊಳಿ ವ್ಯಂಗ್ಯ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:28 pm, Sat, 24 September 22

Follow us on