Hassan News; ಆಪರೇಷನ್ ಸಿಂಗಾಪುರ್ ಒಂದು ಸುಳ್ಳು ಸುದ್ದಿ, ಮಾಧ್ಯಮಗಳಿಗೆ ಸುದ್ದಿ ಬೇಕು ಅಷ್ಟೇ: ಕೆಎಂ ಶಿವಲಿಂಗೇಗೌಡ

|

Updated on: Jul 26, 2023 | 5:19 PM

ಡಿಕೆ ಶಿವಕುಮಾರ್ ವಿಷಯದ ಬಗ್ಗೆ ಮಾತಾಡಿದ್ದಾರಲ್ಲ ಅಂತ ಕೇಳಿದ್ದಕ್ಕೆ ಶಿವಲಿಂಗೇಗೌಡ, ಅವರಿಗೂ ಯಾರೋ ಹಾಗೆ ಹೇಳಿರುತ್ತಾರೆ, ಹಾಗಾಗಿ ಅದರ ಬಗ್ಗೆ ಮಾತಾಡಿರುತ್ತಾರೆ ಎಂದರು

ಹಾಸನ: ಜಿಲ್ಲೆಯ ಡಿಎಂ ಕುರ್ಕೆ ಗ್ರಾಮದಲ್ಲಿ ಮನೆಕುಸಿದು ನಿರ್ವಸತಿಗೊಂಡ ಕುಟುಂಬವೊಂದಕ್ಕೆ ಪರಿಹಾರ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಸೀಕರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಆಪರೇಷನ್ ಸಿಂಗಾಪೂರ್ (Operation Singapore) ಒಂದು ಸುಳ್ಳು ವದಂತಿ ಅಂತ ಹೇಳಿದರು. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅಂಥ ಆಪರೇಷನ್ ಮಾಡಬೇಕಾದರೆ ಸಿಂಗಾಪುರ್ ವರೆಗೆ ಹೋಗಬೇಕು, ಬೆಂಗಳೂರಲ್ಲಿ ಕೂತು ಮಾಡಕ್ಕಾಗಲ್ವಾ? ಅದೆಲ್ಲ ಸುಳ್ಳು ಸುದ್ದಿ, ಮಾಧ್ಯಮದವರಿಗೆ ಸುದ್ದಿ ಬೇಕು ಹಾಗಾಗಿ ಅಂಥದನ್ನೆಲ್ಲ ಸೃಷ್ಟಿ ಮಾಡುತ್ತಾರೆ ಎಂದು ಶಾಸಕರು ಹೇಳಿದರು. ಡಿಕೆ ಶಿವಕುಮಾರ್ ವಿಷಯದ ಬಗ್ಗೆ ಮಾತಾಡಿದ್ದಾರಲ್ಲ ಅಂತ ಕೇಳಿದ್ದಕ್ಕೆ ಶಿವಲಿಂಗೇಗೌಡ, ಅವರಿಗೂ ಯಾರೋ ಹಾಗೆ ಹೇಳಿರುತ್ತಾರೆ, ಹಾಗಾಗಿ ಅದರ ಬಗ್ಗೆ ಮಾತಾಡಿರುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on