ಕಾಲ್ತುಳಿತದ ಬಳಿಕವೂ ಎಚ್ಚೆತ್ತುಕೊಳ್ಳದ ಜನ: ಆಫರ್​​ ಬಟ್ಟೆಗಾಗಿ ಹೇಗೆ ಮುಗಿಬಿದ್ರು ನೋಡಿ

Updated on: Sep 28, 2025 | 3:02 PM

ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದ ನಂತರವೂ ಎಚ್ಚೆತ್ತುಕೊಳ್ಳದ ಯುವಜನತೆ ಆಫರ್ ಬಟ್ಟೆಗಳಿಗಾಗಿ ಮುಗಿಬಿದ್ದಿದ್ದಾರೆ. ಕೊಪ್ಪಳದ ಲೇಬರ್ ಸರ್ಕಲ್​ನಲ್ಲಿ ಆಫರ್ ಟ್ರೆಂಡ್ಸ್ ಎನ್ನುವ ಬಟ್ಟೆ ಅಂಗಡಿ ಪ್ರಾರಂಭವಾಗಿದೆ. ಹೊಸ ಆಫರ್​ಗಾಗಿ ಯುವಕ ಯುವತಿಯರು ಮುಗಿಬಿದ್ದಿದ್ದಾರೆ. ಪ್ರಾರಂಭದ ಮೊದಲನೇ ದಿನದಲ್ಲಿ1 ಸಾವಿರ ರೂಪಾಯಿಗೆ 8 ಶರ್ಟ್, 1 ಸಾವಿರ ರೂಪಾಯಿಗೆ 4 ಪ್ಯಾಂಟ್, 1 ಸಾವಿರ ರೂಪಾಯಿಗೆ ಎರಡು ಜೊತೆ ಶೂ ಎಂದು ಭರ್ಜರಿ ಆಫರ್ ಕಂಡ ಜನ ಅಂಗಡಿಯೊಳಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಯುವಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್ 28: ತಮಿಳುನಾಡಿನಲ್ಲಿ ಸಂಭವಿಸಿರುವ ಕಾಲ್ತುಳಿತದ ನಂತರವೂ ಜನರು ಎಚ್ಚೆತ್ತುಕೊಂಡಿಲ್ಲ ಎನ್ನಬಹುದು. ಏಕೆಂದರೆ ಕೊಪ್ಪಳದ ಲೇಬರ್ ಸರ್ಕಲ್​ನಲ್ಲಿ ಆಫರ್ ಟ್ರೆಂಡ್ಸ್ ಎಂಬ ಬಟ್ಟೆ ಅಂಗಡಿ ಪ್ರಾರಂಭವಾಗಿದ್ದು, ಆಫರ್ ಹಿನ್ನಲೆ ಯುವಕ, ಯುವತಿಯರು ಮುಗಿಬಿದ್ದಿದ್ದರು. ಅಂಗಡಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಟ್ಟರು. ವಿಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More