ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ನಾಗೇಂದ್ರ ಅನ್ನುತ್ತಿದ್ದಂತೆ ಜನ ‘ಮಿನಿಸ್ಟ್ರು ನಾಗೇಂದ್ರ’ ಎಂದರು!
ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣದಲ್ಲಿ ಪ್ರಮುಖ ಅರೋಪಿಯಾಗಿ ಜೈಲು ಸೇರಿದ್ದ ನಾಗೇಂದ್ರ ಸಿದ್ದರಾಮಯ್ಯ ಸಂಪುಟದಲ್ಲಿ ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡ ಇಲಾಖೆ ಸಚಿವರಾಗಿದ್ದರು. ಹಗರಣದಲ್ಲಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವುದರಿಂದ ಪುನಃ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಕೂಗು ವಿಶೇಷವಾಗಿ ಬಳ್ಳಾರಿಯಲ್ಲಿ ಕೇಳಿಬರುತ್ತಿದೆ.
ಬಳ್ಳಾರಿ: ನಗರದ ಆರೋಗ್ಯ ಮಾತೆ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೇದಿಕೆ ಮೇಲೆ ನೆರೆದಿದ್ದ ಗಣ್ಯರ ಹೆಸರಗಳನ್ನು ಸಲ್ಯೂಟೇಶನ್ ಗಾಗಿ ಉಲ್ಲೇಖಿಸುವಾಗ ಮಾಜಿ ಸಚಿವ ಹಾಗೂ ಶಾಸಕ ಬಿ ನಾಗೇಂದ್ರ ಹೆಸರು ಹೇಳುತ್ತಿದ್ದಂತೆಯೇ ಜನರೆಲ್ಲ ಮಿನಿಸ್ಟ್ರು ನಾಗೇಂದ್ರ ಅಂತ ಜೋರಾಗಿ ಕಿರುಚಿದರು. ಸಿದ್ದರಾಮಯ್ಯ ಕಿರುಚಿದವರ ಕಡೆ ನೋಡಿದಾಗ ಅವರ ಹಿಂದೆ ನಿಂತಿದ್ದ ನಾಗೇಂದ್ರ ಮತ್ತು ಬಳ್ಳಾರಿ ಶಾಸಕ ಭರತ್ ರೆಡ್ಡಿ ಸುಮ್ಮನಿರುವಂತೆ ಜನರತ್ತ ಕೈ ಸನ್ನೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಸಿವಿಲ್ ಕೇಸ್
Loading...
Unable to load recommendations.
Follow Us