ಎಲ್ಲ ಕ್ಷೇತ್ರಗಳ ಸಹಭಾಗಿತ್ವವೇ ಪ್ರಗತಿಯ ಶಕ್ತಿ: ‘ನಮೋ ಫಾರ್ ವಿಕಸಿತ ಭಾರತ’ ಸಮಾವೇಶದಲ್ಲಿ ಪಿಎಂ ಮೋದಿ ಮಾತು

Updated on: Sep 08, 2026 | 1:00 PM

ಗುಜರಾತ್‌ನ ವಡೋದರಾದಲ್ಲಿ ಆಯೋಜಿಸಲಾಗಿದ್ದ 'ನಮೋ ಫಾರ್ ವಿಕಸಿತ ಭಾರತ್' ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ಧಿ ಪಯಣಕ್ಕೆ ಮತ್ತಷ್ಟು ವೇಗ ನೀಡಲು ತಾವು ಜನರ ಮಧ್ಯೆ ಬಂದಿರುವುದಾಗಿ ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಮರ್ಪಿತ ನಾಗರಿಕರು ಒಂದೆಡೆ ಸೇರಿರುವುದು ಭಾರತದ ಸರ್ವತೋಮುಖ ಪ್ರಗತಿ ಮತ್ತು ಸಹಭಾಗಿತ್ವದ ಶಕ್ತಿಯನ್ನು ಎತ್ತಿಹಿಡಿದಿದೆ ಎಂದು ಅವರು ಶ್ಲಾಘಿಸಿದ್ದಾರೆ.

ವಡೋದರಾ, ಸೆಪ್ಟೆಂಬರ್ 08: ಗುಜರಾತ್‌ನ ವಡೋದರಾದಲ್ಲಿ ಆಯೋಜಿಸಲಾಗಿದ್ದ ‘ನಮೋ ಫಾರ್ ವಿಕಸಿತ ಭಾರತ್’ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಅಭಿವೃದ್ಧಿ ಪಯಣಕ್ಕೆ ಮತ್ತಷ್ಟು ವೇಗ ನೀಡಲು ತಾವು ಜನರ ಮಧ್ಯೆ ಬಂದಿರುವುದಾಗಿ ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಮರ್ಪಿತ ನಾಗರಿಕರು ಒಂದೆಡೆ ಸೇರಿರುವುದು ಭಾರತದ ಸರ್ವತೋಮುಖ ಪ್ರಗತಿ ಮತ್ತು ಸಹಭಾಗಿತ್ವದ ಶಕ್ತಿಯನ್ನು ಎತ್ತಿಹಿಡಿದಿದೆ ಎಂದು ಅವರು ಶ್ಲಾಘಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರ ಪರಿಶ್ರಮವೂ ಇಲ್ಲಿ ಒಂದಾಗುತ್ತಿದೆ. ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ರೂಪಿಸುವ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ಮತ್ತು ವೇಗ ತುಂಬಲು ನಾನು ಇಂದು ನಿಮ್ಮ ನಡುವೆ ಬಂದಿದ್ದೇನೆ” ಎಂದು ಪ್ರಧಾನಿ ಹೇಳಿದರು.

ಕೃಷಿ, ಕೈಗಾರಿಕೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಒಗ್ಗೂಡುವಿಕೆಯೇ ದೇಶದ ಆರ್ಥಿಕತೆಯ ಬೆಳವಣಿಗೆಯ ಮೂಲ ತಳಹದಿ ಎಂದು ಅವರು ಪ್ರತಿಪಾದಿಸಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ ಪ್ರಧಾನಿಯವರ ಮಾತಿಗೆ ಜಯಘೋಷಗಳ ಮೂಲಕ ಬೆಂಬಲ ವ್ಯಕ್ತಪಡಿಸಿತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us