ದೆಹಲಿ: ಟಿವಿ9 ನೆಟ್ವರ್ಕ್ನ ವ್ಹಾಟ್ ಇಂಡಿಯಾ ಥಿಂಕ್ಸ್ ಟುಡೇ (What India Think Today) ಕಾನ್ಕ್ಲೇವ್ನ ಎರಡನೇ ದಿನವಾಗಿದ್ದ ಸೋಮವಾರ ಪ್ರಧಾನಿ ನರೇಂದ್ರ ಮೋದಿ (PN Narendra Modi) ಅವರನ್ನು ಸ್ವಾಗತಿಸಿ ಮಾತಾಡಿದ ಮೈ ಹೋಮ್ ಗ್ರೂಪ್ನ ಉಪಾಧ್ಯಕ್ಷ ಡಾ ರಾಮೇಶ್ವರ್ ರಾವ್ ಜೂಪಾಲಿ (Dr Rameshwar Rao Jupali) ಅವರು ಟಿವಿ9 ವೇದಿಕೆಯಲ್ಲಿ ಅವರು ನಮ್ಮೊಂದಿಗಿರುವುದು ಸೌಭಾಗ್ಯವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ತಮ್ಮ ನಾಯಕತ್ವದಿಂದ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವನ್ನು ತಮ್ಮ ಪ್ರಭಾವಕ್ಕೊಳಪಡಿಸಿದ್ದಾರೆ, ಅವರು ಕೇವಲ ಒಬ್ಬ ರಾಜಕಾರಣಿ ಅಗಿರದೆ, ಅದಕ್ಕೂ ಮೀರಿದ ದಾರ್ಶನಿಕ, ವಿಶ್ವನಾಯಕ ಮತ್ತು ಸ್ಫೂರ್ತಿಯ ಸೆಲೆ ಆಗಿದ್ದಾರೆ ಎಂದು ಹೇಳಿದರು.
ತನ್ನಂತೆಯೇ ದೇಶದ ಹೊಸ ಪೀಳಿಗೆಗೆ ಪ್ರಧಾನಿ ಮೋದಿ ಪ್ರೇರಣೆಯಾಗಿದ್ದಾರೆ ಎಂದು ಹೇಳಿದ ರಾಮೇಶ್ವರ್ ರಾವ್, ಯುವಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವುದನ್ನು ಪ್ರಧಾನಿ ಮೋದಿ ಬಹಳ ಚೆನ್ನಾಗಿ ಅರಿತಿದ್ದಾರೆ. ಯುವಕರು ತಮ್ಮ ಕನಸುಗಳನ್ನು ಬದ್ಧತೆ ಮತ್ತು ಸಂಕಲ್ಪದೊಂದಿಗೆ ಈಡೇರಿಸಿಕೊಳ್ಳಬಹುದೆಂದು ಅವರು ತೋರಿಸಿಕೊಟ್ಟಿದ್ದಾರೆ. ವಿಕ್ಸಿತ್ ಭಾರತದ ಬಗ್ಗೆ ನಾವು ಯೋಚಿಸುವಾಗ ಮತ್ತು ಭವ್ಯ ಹಾಗೂ ನವ್ಯ ಭಾರತದ ನಿರ್ಮಾಣ ಕಟ್ಟುವ ಸಂಕಲ್ಪ ಮಾಡಿಕೊಂಡಾಗ, ಅವರ ನಾಯಕತ್ವವನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಜೂಪಾಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Tue, 27 February 24