AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi in Karnataka: ವೇದಿಕೆಯ ಮೇಲೆ ಬಂದ ಪ್ರಧಾನಿ ಹಿಂದೆ ನಿಂತಿದ್ದ ಯಡಿಯೂರಪ್ಪನವರನ್ನು ಮುಂದೆ ಕರೆದರು!

PM Narendra Modi in Karnataka: ವೇದಿಕೆಯ ಮೇಲೆ ಬಂದ ಪ್ರಧಾನಿ ಹಿಂದೆ ನಿಂತಿದ್ದ ಯಡಿಯೂರಪ್ಪನವರನ್ನು ಮುಂದೆ ಕರೆದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 25, 2023 | 5:09 PM

Share

ಮೋದಿ ವೇದಿಕೆ ಮೇಲಿರುವವರಿಗೆ ಮತ್ತು ಜನರಿಗೆ ಕೈ ಮುಗಿಯುತ್ತಾ ನಡೆದು ಬರುತ್ತಾ ಹಿಂದೆ ನಿಂತಿದ್ದ ಯಡಿಯೂರಪ್ಪರನ್ನು ಕೈ ಸನ್ನೆಯ ಮೂಲಕ ಮುಂದೆ ಬರುವಂತೆ ಹೇಳುತ್ತಾರೆ.

ದಾವಣಗೆರೆ: ರಾಜ್ಯದ ಅತ್ಯಂತ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಕಡೆಗಣಿಸಲಾಗುತ್ತಿದೆ ಅನ್ನೋದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದನ್ನು ನಿಮಗೆ ತೋರಿಸಿದ್ದೇವೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜ್ಯಕ್ಕೆ ಬಂದಾಗ ಮತ್ತು ವೇದಿಕೆಯ ಮೇಲೆ ಯಡಿಯೂರಪ್ಪನವರೂ ಇದ್ದರೆ ಸನ್ನಿವೇಶವೇ ಬದಲಾಗುತ್ತದೆ ಅನ್ನೋದನ್ನು ನಾವು ಇಲ್ಲಿ ತೋರಿಸುತ್ತಿದ್ದೇವೆ. ಇಂದು ವಿಜಯ ಸಂಕಲ್ಪ ಯಾತ್ರೆ (Vijaya Sankalp Yatre) ಮಹಾಸಂಗಮ ಯಾತ್ರೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ವೇದಿಕೆ ಮೇಲೆ ಬರುವುದನ್ನು ಗಮನಿಸಿ. ಮೋದಿ ವೇದಿಕೆ ಮೇಲಿರುವವರಿಗೆ ಮತ್ತು ಜನರಿಗೆ ಕೈ ಮುಗಿಯುತ್ತಾ ನಡೆದು ಬರುತ್ತಾ ಹಿಂದೆ ನಿಂತಿದ್ದ ಯಡಿಯೂರಪ್ಪರನ್ನು ಕೈ ಸನ್ನೆಯ ಮೂಲಕ ಮುಂದೆ ಬರುವಂತೆ ಹೇಳುತ್ತಾರೆ. ಬಿಎಸ್ ವೈ ಮುಂದೆ ಬಂದು ಜನರತ್ತ ಕೈ ಬೀಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ