Karnataka Assembly Polls: ಚಿತ್ರದುರ್ಗ ಸಮಾವೇಶದಲ್ಲಿ ಮಾತಾಡುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಟೆ ಬಾರಿಸಿದರು!

Updated on: May 02, 2023 | 12:41 PM

ಕಾರ್ಯಕರ್ತರೊಬ್ಬರು ತಮಟೆ ತಂದುಕೊಟ್ಟಾಗ ಅವರು ಪ್ರಸನ್ನಚಿತ್ತರಾಗಿ ಅದನ್ನು ಹೆಗಲಿಗೇರಿಸಿಕೊಂಡು ಬಾರಿಸಲಾರಂಭಿಸುತ್ತಾರೆ.

ಚಿತ್ರದುರ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮಟೆಯಾಗಲೀ (drum), ಡೊಳ್ಳಾಗಲೀ ಅಥವಾ ಆಯಾ ಪ್ರದೇಶಗಳ ಸಾಂಪ್ರದಾಯಿಕ ವಾದ್ಯಗಳಾಗಲೀ-ನುರಿತವರಂತೆ ಬಾರಿಸುತ್ತಾರೆ, ನುಡಿಸುತ್ತಾರೆ. ಚಿತ್ರದುರ್ಗದಲ್ಲಿ ಅವರು ಇಂದು ತಮಟೆಯನ್ನು ಬಾರಿಸಿದರು. ಅವರು ಬಾರಿಸುವ ಶೈಲಿ ನೋಡಿದರೆ ಮೊದಲಬಾರಿಗೆ ಬಾರಿಸುತ್ತಿದ್ದಾರೆ ಅಂತ ಅನಿಸದು. ಕಾರ್ಯಕರ್ತರೊಬ್ಬರು ತಮಟೆ ತಂದುಕೊಟ್ಟಾಗ ಅವರು ಪ್ರಸನ್ನಚಿತ್ತರಾಗಿ ಅದನ್ನು ಹೆಗಲಿಗೇರಿಸಿಕೊಂಡು ಬಾರಿಸಲಾರಂಭಿಸುತ್ತಾರೆ. ಅದಕ್ಕೂ ಮೊದಲು ಪ್ರಧಾನಿಯವರನ್ನು ಶೇಂಗಾದಿಂದ ತಯಾರಿಸಿದ ಪೇಟ ತೊಡಿಸಿ ಸನ್ಮಾನಿಸಿ ಮದಕರಿ ನಾಯಕನ (Madakari Nayak) ಪ್ರತಿಮೆ ನೀಡಿ ಗೌರವಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 02, 2023 12:41 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More