Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru: ರಾತ್ರಿ 10.30 ಗಂಟೆವರೆಗೆ ಹೋಟೆಲ್ ತೆರೆದಿಟ್ಟಿದ್ದಕ್ಕೆ ಸಿಬ್ಬಂದಿ ಮೇಲೆ ಪೊಲೀಸರಿಂದ ದೌರ್ಜನ್ಯ

Mysuru: ರಾತ್ರಿ 10.30 ಗಂಟೆವರೆಗೆ ಹೋಟೆಲ್ ತೆರೆದಿಟ್ಟಿದ್ದಕ್ಕೆ ಸಿಬ್ಬಂದಿ ಮೇಲೆ ಪೊಲೀಸರಿಂದ ದೌರ್ಜನ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 07, 2023 | 10:37 AM

ಸ್ವಚ್ಛ ಮತ್ತು ದಕ್ಷ ಆಡಳಿತ ನೀಡುವ ಪ್ರಾಮಿಸ್ ನೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಪೊಲೀಸರ ದುಂಡಾವರ್ತನೆ ಕಡೆಯೂ ಗಮನಹರಿಸಿದರೆ ಚೆನ್ನಾಗಿರುತ್ತದೆ.

ಮೈಸೂರು: ಇದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಗಮನಕ್ಕೆ. ನಗರದ ಬನ್ನಿ ಮಂಟಪದಲ್ಲಿರುವ ಹೋಟೆಲೊಂದನ್ನು (hotel) ರಾತ್ರಿ 10.30 ಗಂಟೆಗೆ ಯಾಕೆ ಮುಚ್ಚಿಲ್ಲ ಅಂತ ಪೊಲೀಸರು ಪ್ರಶ್ನಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ತಡರಾತ್ರಿವರೆಗೆ ಹೋಟೆಲ್ ಗಳನ್ನು ತೆರೆದಿಡಬಹದು ಅಂತ ಸರ್ಕಾರದ ಆದೇಶವಿದೆ. ಆದಾಗ್ಯೂ ಪೊಲೀಸರು ಸುಖಾಸುಮ್ಮನೆ ಈ ಹೋಟೆಲ್ ಮಾಲೀಕ, ಕ್ಯಾಷಿಯರ್ ಮತ್ತು ಸಿಬ್ಬಂದಿ ಜೊತೆ ತಕರಾರು ತೆಗೆದಿದ್ದಾರೆ. ಖಾಕಿ ಉಡುಪು ಮತ್ತು ಮಫ್ತಿಯಲ್ಲಿರುವ ಪೊಲೀಸರು ಹೊಟೇಲ್ ಸಿಬ್ದಂದಿ ಮೇಲೆ ಜೋರು ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮ್ಮನ್ನು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಲಾಗಿದೆ ಅಂತ ಸಿಬ್ಬಂದಿ ಆರೋಪಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ, ಬೀದಿ ವ್ಯಾಪಾರಿಗಳಿಗೆ ಮತ್ತು ಹೋಟೆಲ್ ಮಾಲೀಕರಿಗೆ ಕಿರುಕುಳ ನೀಡುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಸ್ವಚ್ಛ ಮತ್ತು ದಕ್ಷ ಆಡಳಿತ ನೀಡುವ ಪ್ರಾಮಿಸ್ ನೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಪೊಲೀಸರ ದುಂಡಾವರ್ತನೆ ಕಡೆಯೂ ಗಮನಹರಿಸಿದರೆ ಚೆನ್ನಾಗಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ