ದರ್ಶನ್ ರಾಜಾತಿಥ್ಯ ಪೋಟೋ ಹೊರಬಿದ್ದ 3 ದಿನ ನಂತರ ಪೊಲೀಸ್ ಆಯುಕ್ತ ದಯಾನಂದ ಜೈಲಿಗೆ ಭೇಟಿ
ದರ್ಶನ್ಗೆ ಜೈಲಲ್ಲಿ ಸಿಗುತ್ತಿರುವ ರಾಜಾತಿಥ್ಯ ಹಿನ್ನೆಲೆಯಲ್ಲಿ ಸರ್ಕಾರ ಒಂಭತ್ತು ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ ಮತ್ತು ಚಿತ್ರನಟನನ್ನು ಬೇರೆ ಜೈಲಿಗೆ ಕಳಿಸುವ ತಯಾರಿ ನಡೆಸಿದೆ. ಆದರೆ, ಸಿಎಂ ಅಗಲೀ ಗೃಹ ಸಚಿವರಾಗಲೀ ದರ್ಶನ್ ಶಿಫ್ಟ್ ಮಾಡುವುದನ್ನು ಖಚಿತವಾಗಿ ಹೇಳುತ್ತಿಲ್ಲ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿತ್ರನಟ ದರ್ಶನ್ ಗೆ ಜೈಲಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿರುವ ಫೋಟೋ ಬೆಳಕಿಗೆ ಮೂರು ದಿನಗಳ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಇಂದು ಆನೇಕಲ್ನಲ್ಲಿರುವ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದರು. ಈಗಾಗಲೇ ವರದಿಯಾಗಿರುವಂತೆ ಗೃಹಸಚಿವ ಜಿ ಪರಮೇಶ್ವರ್ ಫೋಟೋ ಸಾರ್ವಜನಿಕಗೊಂಡ ಮರುದಿನ ಜೈಲಿಗೆ ಭೇಟಿ ನೀಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Darshan Arrest: ದರ್ಶನ್ ಬಂಧನ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದೇನು? ವಿಡಿಯೋ ನೋಡಿ
Loading...
Unable to load recommendations.
Follow Us