‘ಕರಾವಳಿ’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ ಇದು

Updated on: Jul 07, 2026 | 12:31 PM

ಕರಾವಳಿ ಚಿತ್ರದ ಕಾರ್ಯಕ್ರಮದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಅಭಿಮಾನಿಗಳ ಪ್ರತಿಭಟನೆಗೆ ಕಾರಣವಾಯಿತು. ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕರು, ಪ್ರಜ್ವಲ್ ಹಾಜರಿ ಬಗ್ಗೆ ಖಚಿತಪಡಿಸಿದ್ದರು ಎಂದು ತಿಳಿಸಿದ್ದಾರೆ. ಘಟನೆಯಿಂದ ಚಿತ್ರತಂಡಕ್ಕೆ ಅಸಮಾಧಾನವಾಗಿದ್ದು, ಸಿನಿಮಾ ಗೊಂದಲಗಳಿಗಿಂತ ಕಥೆಯ ಮೂಲಕ ಮಾತನಾಡಬೇಕು ಎಂದು ಹೇಳಿದ್ದಾರೆ.

ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಅಭಿಮಾನಿಗಳ ಪ್ರತಿಭಟನೆಗೆ ಕಾರಣವಾಗಿ ಗೊಂದಲ ಸೃಷ್ಟಿಸಿತು. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಿತ್ರತಂಡದ ನಿರ್ದೇಶಕ ಗುರುದತ್ ಗಾಣಿಗ, ‘ಪ್ರಜ್ವಲ್ ದೇವರಾಜ್ ಕಾರ್ಯಕ್ರಮಕ್ಕೆ ಬರುವುದಾಗಿ ನಿನ್ನೆ ರಾತ್ರಿ ಹೇಳಿದ್ದರು. ಅವರ ಅಭಿಮಾನಿಗಳ ಸುಮಾರು 100 ಜನರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಮಾಹಿತಿ ನೀಡಲಾಗಿತ್ತು ಮತ್ತು ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು’ ಎಂದಿದ್ದಾರೆ. ಆದರೆ, ಅವರು ಬರಲೇ ಇಲ್ಲ.

ಇನ್ನು, ಡಬ್ಬಿಂಗ್ ವಿಷಯವಾಗಿ ಮಾತನಾಡಿದ ಗುರುದತ್ ಅವರು, ‘ಕರಾವಳಿ ಚಿತ್ರ ಮಂಗಳೂರು ಶೈಲಿಯ ಭಾಷೆಯನ್ನು ಒಳಗೊಂಡಿರುವುದರಿಂದ, ಪ್ರಜ್ವಲ್ ಅವರ ಧ್ವನಿ ಅದಕ್ಕೆ ಸೂಕ್ತವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಚರ್ಚೆ ಇತ್ತು. ಚಿತ್ರವು ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ ಮತ್ತು ಇನ್ನೂ ಡಬ್ಬಿಂಗ್ ಕೆಲಸಗಳು ಬಾಕಿ ಇವೆ. ಡಬ್ಬಿಂಗ್ ಸ್ಟುಡಿಯೋವನ್ನು ಸಹ ಇದಕ್ಕಾಗಿ ಕಾಯ್ದಿರಿಸಲಾಗಿದೆ’ ಎಂದಿದ್ದಾರೆ ಗುರುದತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Jul 07, 2026 12:30 PM
Follow Us