ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ

|

Updated on: Aug 22, 2024 | 11:47 AM

ಗಜಪಡೆಯ ಲೀಡರ್ ಆಗಿರುವ ಅಭಿಮನ್ಯು ಎಂದಿನಂತೆ ತನ್ನ ಶಾಂತ ಮತ್ತು ಮೃದು ಸ್ವಭಾವದಿಂದ ಗಮನ ಸೆಳೆಯುತ್ತಾನೆ. ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಏಕಲವ್ಯನಿಗೆ ಈ ವರ್ಷದಿಂದ ತಾಲೀಮು ಶುರುವಾಗಲಿದೆ. ಮುಂಬರುವ ದಿನಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಅವನ ಮೇಲೆ ಬೀಳಲಿದೆ.

ಮೈಸೂರು: ಈಗಾಗಲೇ ನಾವು ವರದಿ ಮಾಡಿರುವಂತೆ ಕರ್ನಾಟಕ ಸರ್ಕಾರ ದಸರಾ ಮಹೋತ್ಸವ-2024 ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು ಅದಕ್ಕಾಗಿ ತಯಾರಿಗಳು ಶುರುವಾಗಿವೆ. ದಸರಾ ಉತ್ಸವದ ಮುಖ್ಯ ಆಕರ್ಷಣೆಯೆಂದರೆ ಜಂಬೂ ಸವಾರಿ. ಇದರಲ್ಲಿ ಭಾಗಿಯಾಗುವ ಆನೆಗಳ ಮೊದಲ ತಂಡವನ್ನು ವೀರನಹೊಸಳ್ಳಿ ಕಾಡಿನಿಂದ ಮೈಸೂರಿಗೆ ಲಾರಿಗಳಲ್ಲಿ ಕರೆತರಲಾಗಿದ್ದು ಅವುಗಳನ್ನು ನಗರದ ಅಶೋಕನಗರದಲ್ಲಿರುವ ಅರಣ್ಯಭವನದಲ್ಲಿ ಇರಿಸಲಾಗಿದೆ ಎಂದು ನಮ್ಮ ಮೈಸೂರು ವರದಿಗಾರ ಹೇಳುತ್ತಾರೆ. ಮೊದಲ ತಂಡದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು ಜೊತೆ ಇದೇ ಮೊದಲಬಾರಿಗೆ ನಾಡಿಗೆ ಬಂದು ದಸರಾ ಉತ್ಸವದಲ್ಲಿ ಭಾಗಿಯಾಗುತ್ತಿರುವ ಏಕಲವ್ಯ ಮತ್ತು ಇತರ ಏಳು ಆನೆಗಳು ಮೈಸೂರಿಗೆ ಆಗಮಿಸಿವೆ. ಇನ್ನೂ ಐದು ಆನೆಗಳು ಇಂದು ಸಾಯಂಕಾಲ ಬರಲಿವೆ. ವರದಿಗಾರ ಹೇಳುವಂತೆ ಎಲ್ಲ 13 ಆನೆಗಳನ್ನು ನಾಳೆ ಅರಣ್ಯಭವನದಿಂದ ಕಾಲ್ನಡಿಗೆಯಲ್ಲಿ ಅರಮನೆಗೆ ಕರೆದೊಯ್ಯಲಾಗುತ್ತದೆ ಮತ್ತು ಅವುಗಳ ಸಾಂಪ್ರದಾಯಿಕ ಸ್ವಾಗತ ಪೂಜೆಗಾಗಿ ಸಿದ್ಧತೆಗಳು ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಸರಾ ಮಹೋತ್ಸವ-2024: ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರದ ಸಂಕಲ್ಪ

Follow us on