ಪಬ್ ಬೆಂಕಿ ದುರಂತ, ಬೆಂಗಳೂರು; ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಪಬ್ ನಡೆಸಲು ಅನುಮತಿ ನೀಡಲಾಗಿದೆ: ಪ್ರತ್ಯಕ್ಷದರ್ಶಿ

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ ಪಬ್ ಇರುವ ಜಾಗದ ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಅದನ್ನು ನಡೆಸಲು ಅನುಮತಿ ನೀಡಲಾಗಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿಯೊಂದಿಗೆ ಮಾತಾಡಿರುವ ಅವರು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಪಬ್ ಓಪನ್ ಇರುತ್ತದೆ ಮತ್ತು ಜೋರು ಧ್ವನಿಯಲ್ಲಿ ಮ್ಯೂಸಿಕ್ ಸಿಸ್ಟಮ್ ಗಳು ಆನ್ ಮಾಡುವುದರಿಂದ ಸುತ್ತಮುತ್ತ ವಾಸ ಮಾಡುವ ಜನರಿಗೆ ನಿದ್ದೆ ಮಾಡಲಾಗುತ್ತಿಲ್ಲ ಎಂದು ಹೇಳುತ್ತಾರೆ.

ಪಬ್ ಬೆಂಕಿ ದುರಂತ, ಬೆಂಗಳೂರು; ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಪಬ್ ನಡೆಸಲು ಅನುಮತಿ ನೀಡಲಾಗಿದೆ: ಪ್ರತ್ಯಕ್ಷದರ್ಶಿ
|

Updated on: Oct 18, 2023 | 2:54 PM

ಬೆಂಗಳೂರು: ನಗರದಲ್ಲಿ ಬೆಂಕಿ ಅಕಸ್ಮಿಕಗಳು ಮೇಲಿಂದ ಮೇಲೆ ಜರುಗುತ್ತಿವೆ. ಅತ್ತಿಬೆಲೆಯಲ್ಲಿ ಪಟಾಕಿಯಿದ್ದ ಗೋದಾಮಿನಲ್ಲಿ ದುರಂತ (Attibele fire tragedy) ಸಂಭವಿಸಿದ ಬಳಿಕ ಸಾಲುಸಾಲಾಗಿ ಅಗ್ನಿ ಅವಗಢಗಳಳು ನಡೆಯುತ್ತಿವೆ. ಇಂದು ಬೆಳಗ್ಗೆ ತಾವರೆಕೆರೆ ಮುಖ್ಯರಸ್ತೆಯೊಂದರಲ್ಲಿರುವ ಒಂದು ಪಬ್ ನಲ್ಲಿ (pub on Tavarekere road) ಸಿಲಿಂಡರ್ ಗಳು ಸ್ಫೋಟಗೊಂಡ (Cylinder blast) ಕಾರಣ ಮತ್ತೊಂದು ಅಗ್ನಿ ದುರಂತ ಜರುಗಿದೆ. ದುರಂತ ಸಂಭವಿಸಿದಾಗ ಪ್ರಾಣವುಳಿಸಿಕೊಳ್ಳಲು ಪ್ರೇಮ್ ಹೆಸರಿನ ಯುವಕನೊಬ್ಬ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಜಿಗಿದ ದೃಶ್ಯ ವೈರಲ್ ಅಗಿದೆ. ಅವನಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ ಪಬ್ ಇರುವ ಜಾಗದ ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಅದನ್ನು ನಡೆಸಲು ಅನುಮತಿ ನೀಡಲಾಗಿದೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿಯೊಂದಿಗೆ ಮಾತಾಡಿರುವ ಅವರು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಪಬ್ ಓಪನ್ ಇರುತ್ತದೆ ಮತ್ತು ಜೋರು ಧ್ವನಿಯಲ್ಲಿ ಮ್ಯೂಸಿಕ್ ಸಿಸ್ಟಮ್ ಗಳು ಆನ್ ಮಾಡುವುದರಿಂದ ಸುತ್ತಮುತ್ತ ವಾಸ ಮಾಡುವ ಜನರಿಗೆ ನಿದ್ದೆ ಮಾಡಲಾಗುತ್ತಿಲ್ಲ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us