Puneeth Rajkumar: ಲೇಸರ್​ ಶೋನಲ್ಲಿ ಅರಳಿತು ಪುನೀತ್ ರಾಜ್​ಕುಮಾರ್ ಚಿತ್ರ

Edited By:

Updated on: Feb 07, 2023 | 9:25 AM

ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ಲೇಜರ್ ಬೆಳಕಿನಲ್ಲಿ ಪ್ರದರ್ಶಿಸಿ ‘ಗೊಂಬೆ ಹೇಳುತೈತೆ..’ ಹಾಡು ಹಾಕಲಾಗಿದೆ. ಈ ಲೇಸರ್​ ಶೋ ಎಲ್ಲರ ಗಮನ ಸೆಳೆಯಿತು.

ಉಡುಪಿಯ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ 33 ಅಡಿ ಎತ್ತರದ ಪರಶುರಾಮನ ಕಂಚಿನ ಮೂರ್ತಿ ಇಡಲಾಗಿದೆ. ಇದನ್ನು ನೋಡಲು ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಲೇಸರ್ ಶೋ ಕಾರ್ಯಕ್ರಮ ನಡೆಯಿತು. ಲೇಸರ್ ಶೋನಲ್ಲಿ ಪರುಶುರಾಮನ ಸಾಧನೆ ಹಾಗೂ ಜೀವನ ವೃತ್ತಾಂತ ಪ್ರದರ್ಶಿಸಲಾಗಿದೆ. ಜತೆಗೆ  ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಚಿತ್ರವನ್ನು ಲೇಜರ್ ಬೆಳಕಿನಲ್ಲಿ ಪ್ರದರ್ಶಿಸಿ ‘ಗೊಂಬೆ ಹೇಳುತೈತೆ..’ ಹಾಡು ಹಾಕಲಾಗಿದೆ. ಈ ಲೇಸರ್​ ಶೋ ಎಲ್ಲರ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Web contact

TV9 Kannada

Read More