ಬಸ್​​ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿ ಪ್ರಾಮಾಣಿಕತೆ ಮೇರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2024 | 3:45 PM

ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಸೋಮಶೇಖರ್​ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ ಬಸ್​ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್​ನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದರು. ಸದ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್​ಗೆ ಹಸ್ತಾಂತರ ಮಾಡುವ ಮೂಲಕ ಕೆಎಸ್​ಆರ್​ಟಿಸಿ ನಿರ್ವಾಹಕ ಮತ್ತು ಚಾಲಕ ಹಿಂದಿರುಗಿಸುವ ಮೂಲಕ ಮಾನವೀಯತೆ ಮೇರೆದಿದ್ದಾರೆ.

ರಾಯಚೂರು, ಜೂನ್​ 19: ಬಸ್​ನಲ್ಲಿ ಬಿಟ್ಟು ಹೋಗಿದ್ದ 2.5 ಲಕ್ಷ ರೂ. ಹಣವನ್ನು (money) ಕೆಎಸ್​ಆರ್​ಟಿಸಿ (KSRTC) ನಿರ್ವಾಹಕ ಮತ್ತು ಚಾಲಕ ಹಿಂದಿರುಗಿಸುವ ಮೂಲಕ ಮಾನವೀಯತೆ ಮೇರೆದಿರುವಂತಹ ಘಟನೆ ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಕೆಎಸ್​ಆರ್​ಟಿಸಿ ಬಸ್ ಚಾಲಕ ಹನಮಂತ್​ ಹಾಗೂ ಕಂಡಕ್ಟರ್ ಮಂಜುನಾಥ್ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಸೋಮಶೇಖರ್​ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ ಬಸ್​ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. ನಿನ್ನೆ ಮಧ್ಯಾಹ್ನ ಮಾನ್ವಿಯಿಂದ ಇದೇ ಬಸ್​ನಲ್ಲಿ ರಾಯಚೂರಿಗೆ ಸೋಮಶೇಖರ್ ಆಗಮಿಸಿದ್ದರು. ಈ ವೇಳೆ 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್​ನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದಾರೆ. ಬಳಿಕ ಹೈದರಾಬಾದ್​ನಲ್ಲಿ ಲಗೇಜ್ ಕ್ಯಾರಿಯರ್ನಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಹಣ ಪತ್ತೆ ಹಿನ್ನೆಲೆ ಬ್ಯಾಗ್​ನಲ್ಲಿದ್ದ ಬ್ಯಾಂಕ್ ಪಾಸ್​ಬುಕ್​ ತಪಾಸಣೆ ಮಾಡಲಾಗಿದೆ. ಆ ಬಳಿಕ ಅದರಲ್ಲಿದ್ದ ಫೋನ್ ನಂಬರ್ ಮೂಲಕ ಸೋಮಶೇಖರ್​ಗೆ ಕರೆ ಮಾಡಲಾಗಿದೆ. ಇಂದು ಮರಳಿ ಹೈದರಾಬಾದ್​ನಿಂದ ಆಗಮಿಸುವ ವೇಳೆ ರಾಯಚೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್​ಗೆ ಹಸ್ತಾಂತರ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on