ರಾಯಚೂರಿನಲ್ಲಿ ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್, ದ್ರೋಹಿ ಎಂದ ಮುಸ್ಲಿಂ ಮಹಿಳೆಯರು

Updated By: ವಿವೇಕ ಬಿರಾದಾರ

Updated on: May 21, 2025 | 3:55 PM

ರಾಯಚೂರಿನಲ್ಲಿ ವಕ್ಫ್ ಆಸ್ತಿ ಕಬಳಿಕೆ ತೆರವುಗೊಳಿಸಲಾಯಿತು. ಈ ವೇಳೆ ಆಕ್ರೋಶಗೊಂಡ ಮುಸ್ಲಿಂ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಹಸ್ಮಿಯಾ ಕಾಂಪೌಂಡ್‌ನಲ್ಲಿ 30 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದವು. ವಕ್ಫ್ ನೀತಿಯನ್ನು ಮಹಿಳೆಯರು ತೀವ್ರವಾಗಿ ಖಂಡಿಸಿದರು. ವಕ್ಫ್​ ನಮ್ಮ ದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು, ಮೇ 21: ರಾಯಚೂರು ನಗರದಲ್ಲಿ ಬುಧವಾರ (ಮೇ.21) ವಕ್ಫ್‌ ಆಸ್ತಿ ಕಬಳಿಕೆ ತೆರವು ಮಾಡಲಾಯಿತು. ನಗರದ ಹಸ್ಮಿಯಾ ಕಾಂಪೌಂಡ್‌ನಲ್ಲಿ ಮನೆಗಳ ತೆರವು ಕಾರ್ಚಾಚರಣೆ ವೇಳೆ ಮುಸ್ಲಿಂ ಮಹಿಳೆಯರು ವಕ್ಫ್ ವಿರುದ್ಧ ಕಿಡಿಕಾರಿದರು. ವಕ್ಫ್ ನಮ್ಮ ದುಷ್ಮನ್, ದ್ರೋಹಿ ಅಂತ ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಮಹಿಳಾ ಪೊಲೀಸರು, ಮುಸ್ಲಿಂ ಮಹಿಳೆಯರನ್ನು ಡಿಎಆರ್ ವಾಹನದಲ್ಲಿ ಕರೆದೊಯ್ದರು. ಹಸ್ಮಿಯಾ ಕಾಂಪೌಂಡ್‌ನಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು.

Published on: May 21, 2025 03:54 PM