Kodagu News: ಕೊಡಗು ಜಿಲ್ಲೆಯಲ್ಲಿ ಮಳೆಯ ರುದ್ರನರ್ತನ, ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಭಾಗಮಂಡಲ ಮತ್ತು ಜಿಲ್ಲಾ ಕೇಂದ್ರ ಮಡಿಕೇರಿ ನಡುವಿನ ರಸ್ತೆ ಸಹ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಮಡಿಕೇರಿ: ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತಿದೆ ಮಳೆಯ ಆರ್ಭಟ ಕೊಡಗು ಜಿಲ್ಲೆಯಲ್ಲಿ (Kodagu district). ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯತ್ತಿದೆ. ನಾಪೋಕ್ಲು (Napoklu)-ಚೆರಿಯ ಪರಂಬು ಪ್ರದೇಶಗಳು ಜಲಾವೃತಗೊಂಡಿವೆ. ಚೆರಿಯ ಪೆರಂಬು ಗ್ರಾಮಕ್ಕೆ ಪ್ರವಾಸ ಬಂದಿದ್ದ ಕೆಲವರು ಭಾರೀ ಮಳೆಯಂದಾಗಿ ಅಲ್ಲೇ ಸಿಲುಕುವಂತಾಗಿತ್ತು. ರಸ್ತೆಗಳಲೆಲ್ಲ ಜಲಾವೃತಗೊಂಡ (submerged) ಕಾರಣ ಅವರಿಗೆ ಸಾರಿಗೆ ಸಾಧನ ಇಲ್ಲವಾಗಿಬಿಟ್ಟಿತ್ತು. ಸ್ಥಳೀಯರು ತೆಪ್ಪಗಳ ಮೂಲಕ ಅವರನ್ನು ನಾಪೋಕ್ಲುಗೆ ತಂದು ಬಿಟ್ಟಿದ್ದಾರೆ. ಭಾಗಮಂಡಲ ಮತ್ತು ಜಿಲ್ಲಾ ಕೇಂದ್ರ ಮಡಿಕೇರಿ ನಡುವಿನ ರಸ್ತೆ ಸಹ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದೆ.
ಮತ್ತಷ್ಟು ವಿಡಿಯೋಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
