ಕೋಲಾರ: ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಪಿಎಸ್ಐ ಮೇಲೆ‌ ನಿವೃತ್ತ ಎಎಸ್​ಐನ ದರ್ಪ

Edited By: ವಿವೇಕ ಬಿರಾದಾರ

Updated on: Dec 12, 2023 | 8:10 AM

ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗಿ ಎಂದು ಗೌನಪಲ್ಲಿ ಪಿಎಸ್​ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.

ಕೋಲಾರ, ಡಿಸೆಂಬರ್​ 11: ಪಿಎಸ್ಐ (PSI) ಮೇಲೆ‌ ನಿವೃತ್ತ ಎಎಸ್​ಐ (ASI) ದರ್ಪ ತೋರಿರುವ ಘಟನೆ ಶ್ರೀನಿವಾಸಪುರ (Srinivaspur) ತಾಲೂಕಿನ ಬೀಮಗಾನಪಲ್ಲಿ ಕ್ರಾಸ್ ಬಳಿ ನಡೆದಿದೆ. ಡಿಸೆಂಬರ್​ 7 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದ ಗೌನಪಲ್ಲಿ ಪಿಎಸ್​ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.

ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗುವಂತೆ ಅವಾಜ್​ ಹಾಕಿದ್ದಾರೆ. ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್​ಐ ರಾಮು ಅವರಿಗೆ ಅವಾಚ್ಯ ಶಬ್ದಗಳಿಂದ‌ ನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಿವೃತ್ತ ರಾಜಗೋಪಾಲರೆಡ್ಡಿ ಮತ್ತು ಹರೀಶ್ ರೆಡ್ಡಿ ಮೇಲೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹಳೆಯ ಪ್ರಕಣದವೊಂದರಲ್ಲಿ ತಮಗೆ ಅನುಕೂಲ ಮಾಡಿಲ್ಲವೆಂದು ನಿವೃತ್ತ ರಾಜಗೋಪಾಲರೆಡ್ಡಿ ಪಿಎಸ್​ಐ ರಾಮು ಅವರ ಮೇಲೆ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Follow Us
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More