ಕೋಲಾರ: ಅಪಘಾತಗಳು (Road Accident) ಹೇಗೆಲ್ಲಾ ಸಂಭವಿಸುತ್ತಿವೆ ನೋಡಿ. ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ರಸ್ತೆ ಅಪಘಾತವಾಗಿದೆ. ಅಪಘಾತದ ನಂತರ ಟೊಮ್ಯಾಟೊ ತೋಟಕ್ಕೆ ನುಗ್ಗಿ ನಿಂತಿದೆ ಕಾರು. ಈ ಮಧ್ಯೆ ದ್ವಿಚಕ್ರ ವಾಹನ ಸವಾರರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ (Death).
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ (Srinivasapur, Kolar) ತಾಡಿಗೋಲ್ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಮೃತರು ತಾಡಿಗೋಲ್ ಗ್ರಾಮದ ಶಂಕರಪ್ಪ(38) ಮತ್ತು ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ (40) ಎಂದು ಗುರುತಿಸಲಾಗಿದೆ. ಮಹೀಂದ್ರಾ XUV ಕಾರು ಹಾಗೂ ಸ್ಪಲೆಂಡರ್ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು (Gownipalli Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Mon, 10 July 23