ಡಿ ರೂಪಾ-ಗಂಗರಾಜು ಸಂಬಾಷಣೆಯ ಆಡಿಯೋ ಕ್ಲಿಪ್ ಅಸ್ತ್ರವಾಗಿ ಬಳಸಿಕೊಳ್ಳಲು ರೋಹಿಣಿ ಸಿಂಧೂರಿ ಸಿದ್ಧರಿಲ್ಲ!

Updated on: Feb 22, 2023 | 12:18 PM

ರೂಪಾ ವಿರುದ್ಧ ಮಾತಾಡಲು ಅವರಿಗೆ ಅಸ್ತ್ರ ಸಿಕ್ಕಂತಾದರೂ ರೋಹಿಣಿಗೆ ಅದರಿಂದ ಸಂತೋಷವೇನೂ ಆಗಿಲ್ಲ.

ಬೆಂಗಳೂರು: ಮೈಸೂರಿನ ಸಾಮಾಜಿಕ ಕಾರ್ಯಕರ್ತ ಗಂಗರಾಜು (Gangaraju) ತನ್ನ ಹಾಗೂ ಡಿ ರೂಪಾ ಮೌದ್ಗೀಲ್ ನಡುವೆ ನಡೆದ ಸಂಭಾಷಣೆಯನ್ನು (conversation) ಆಡಿಯೋ ಕ್ಲಿಪ್ ಬಹಿರಂಗಗೊಳಿಸುತ್ತಿದ್ದಂತೆಯೇ ರೋಹಿಣಿ ಸಿಂಧೂರಿ ಮುಖದಲ್ಲಿ ಸ್ವಲ್ಲ ಗೆಲುವು, ಮಂದಹಾಸ ಕಾಣಿಸಬೇಕಿತ್ತು. ರೂಪಾ ವಿರುದ್ಧ ಮಾತಾಡಲು ಅವರಿಗೆ ಅಸ್ತ್ರ ಸಿಕ್ಕಂತಾದರೂ ರೋಹಿಣಿಗೆ ಅದರಿಂದ ಸಂತೋಷವೇನೂ ಆಗಿಲ್ಲ. ಇಂದು ಬೆಳಗ್ಗೆ ಅವರು ಕಚೇರಿಗೆ ಹೊರಡಲು ಮನೆಯಿಂದ ಹೊರಬಿದ್ದಾಗ, ಮಾಧ್ಯಮ ಪ್ರತಿನಿಧಿಗಳು (media persons) ಅವರು ಪ್ರತಿಕ್ರಿಯೆ ಕೇಳಲು ದುಂಬಾಲು ಬೀಳುತ್ತಾರೆ. ಆದರೆ ರೋಹಿಣಿ ಮಾತ್ರ ಏನನ್ನೂ ರಿಯಾಕ್ಟ್ ಮಾಡದೆ ತಮ್ಮ ಕಾರು ಹತ್ತಿ ಹೊರಟು ಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More