AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಅದೇ ಹಳಿಯಲ್ಲಿ ಸಿಲುಕಿದ ವೃದ್ಧ, ಸಮಯಪ್ರಜ್ಞೆ ಮೆರೆದ ಆರ್​ಪಿಎಫ್ ಸಿಬ್ಬಂದಿ

ದಾವಣಗೆರೆ: ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಅದೇ ಹಳಿಯಲ್ಲಿ ಸಿಲುಕಿದ ವೃದ್ಧ, ಸಮಯಪ್ರಜ್ಞೆ ಮೆರೆದ ಆರ್​ಪಿಎಫ್ ಸಿಬ್ಬಂದಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jul 09, 2023 | 7:58 PM

Share

ರೈಲು ಬರುತ್ತಿದ್ದಾಗಲೇ ಹಳಿ ದಾಟಲು ಹೋಗಿ ಹಳಿಯಲ್ಲೇ ಸಿಲುಕಿದ ವೃದ್ಧನನ್ನು ಆರ್​ಪಿಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ದಾವರಣಗರೆ ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದಾವಣಗೆರೆ: ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ಗೆ ವಾಸ್ಕೋ ರೈಲು ಆಗಮಿಸುತ್ತಿದ್ದಂತೆ ಹಳಿ ದಾಟಲು ಹೋಗಿ ಹಳಿಯಲ್ಲೇ ಸಿಲುಕಿಕೊಂಡ ವೃದ್ಧನನ್ನು ಆರ್​ಪಿಎಫ್ (RPF) ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ರೈಲು ಬರುತ್ತಿರುವುದನ್ನು ಗಮನಿಸದೇ ನೇರವಾಗಿ ಪ್ಲಾಟ್​ಫಾರ್ಮ್​ನಿಂದ ಹಳಿಗೆ ಇಳಿದ ವೃದ್ಧ ರಂಗಪ್ಪ ಸಮೀಪ ಬಂದ ರೈಲು ನೋಡಿ ಭಯಗೊಂಡು ಮತ್ತೆ ಪ್ಲಾಟ್​ಫಾರ್ಮ್​ಗೆ ಏರಲು ಮುಂದಾಗಿದ್ದಾರೆ. ಅಷ್ಟರಲ್ಲಿ ನೆರವಗಿಗೆ ದಾವಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್ ಶಿವಾನಂದ, ವೃದ್ಧನನ್ನು ಎಳೆದು ಹಳಿಯಿಂದ ಹೊರಕ್ಕೆ ಕೊಂಡೊಯ್ದಿದ್ದಾರೆ. ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಆರ್​ಪಿಎಫ್ ಮತ್ತು ರೈಲ್ವೇ ಪೊಲೀಸರು ಶಿವಾನಂದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More