‘ಶಾಂತಿ ಕ್ರಾಂತಿ’ ಶೂಟಿಂಗ್​ನಲ್ಲಿ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್​ ತರಿಸಿದ್ದರು ರವಿಚಂದ್ರನ್​: ದೊಡ್ಡಣ್ಣ

| Updated By: ಮದನ್​ ಕುಮಾರ್​

Updated on: Oct 18, 2021 | 3:12 PM

ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ಅವರ ಅನುಭವ ಅಪಾರ. ರವಿಚಂದ್ರನ್​ ಜೊತೆ ಅವರು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆ ನೆನಪನ್ನು ಅವರು ಟಿವಿ9 ಜತೆ ಹಂಚಿಕೊಂಡಿದ್ದಾರೆ.

ಕನ್ನಡದ ಹಲವು ಸ್ಟಾರ್​ ಕಲಾವಿದರ ಜೊತೆ ನಟಿಸಿದ ಅನುಭವ ಹೊಂದಿದ್ದಾರೆ ಹಿರಿಯ ನಟ ದೊಡ್ಡಣ್ಣ. ಅದರಲ್ಲೂ ರವಿಚಂದ್ರನ್​ ಸಿನಿಮಾಗಳಲ್ಲಿ ಅವರಿಗೆ ಒಂದು ಮುಖ್ಯ ಪಾತ್ರ ಇದ್ದೇ ಇರುತ್ತಿತ್ತು. ‘ಕ್ರೇಜಿ ಸ್ಟಾರ್​’ ಜತೆ ಕೆಲಸ ಮಾಡಿದ ದಿನಗಳನ್ನು ದೊಡ್ಡಣ್ಣ ಮೆಲುಕು ಹಾಕಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಅವರು ನೆನಪಿನ ಬುತ್ತಿ ತೆರೆದಿದ್ದಾರೆ.

‘ಕನ್ನಡದ ಮಾರುಕಟ್ಟೆಯ ವ್ಯಾಪ್ತಿ ಎಷ್ಟು ದೊಡ್ಡದು ಎಂದು ಮೊದಲ ಬಾರಿಗೆ ತೋರಿಸಿಕೊಟ್ಟವರೇ ರವಿಚಂದ್ರನ್​. ಅವರು ಕನ್ನಡದ ಶ್ರೇಷ್ಠ ನಾಯಕ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಎಲ್ಲ ಭಾಷೆಯ ಚಿತ್ರರಂಗದವರು ರವಿಚಂದ್ರನ್​ ಅವರನ್ನು ಇಷ್ಟಪಡುತ್ತಿದ್ದರು. ಶಾಂತಿಕ್ರಾಂತಿ ಸಿನಿಮಾದ ಶೂಟಿಂಗ್​ ವೇಳೆ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್​ ತರಿಸುತ್ತಿದ್ದರು. ಯಾವ ಕನ್ನಡ ಸಿನಿಮಾದಲ್ಲೂ ಹಾಗೆ ಆಗಿರಲಿಲ್ಲ. ನಾಲ್ಕು ಭಾಷೆಯ ನಟರು ಒಂದೇ ಸೆಟ್​ನಲ್ಲಿ ಕುಳಿತುಕೊಳ್ಳುತ್ತಿದ್ದೆವು’ ಎಂದು ದೊಡ್ಡಣ್ಣ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್​ ಸ್ಟೋರಿ

ಶಂಕರ್‌ನಾಗ್​ಗೆ ಆ್ಯಕ್ಸಿಡೆಂಟ್​ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್‌ ಶೂಟ್​ ಮಾಡಿದ್ವಿ; ದೊಡ್ಡಣ್ಣ

Follow us on