‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್​ ಸ್ಟೋರಿ

‘ನಾನು ಲವ್​ ಮಾಡಿ ಮದುವೆ ಆದವನಲ್ಲ. ಮದುವೆ ಆದ ಮೇಲೆ ಲವ್​ ಮಾಡಿದೆ. ದೇಹದ ಸೌಂದರ್ಯ ಮುಖ್ಯವಲ್ಲ. ಆತ್ಮದ ಸೌಂದರ್ಯ ಮುಖ್ಯ’ ಎಂದು ನಟ ದೊಡ್ಡಣ್ಣ ಹೇಳಿದ್ದಾರೆ.

‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್​ ಸ್ಟೋರಿ
| Updated By: ಮದನ್​ ಕುಮಾರ್​

Updated on: Oct 17, 2021 | 4:09 PM

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಅವರು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆ ಆಗಿದ್ದು ಹೇಗೆ? ಆ ಕಾಲದಲ್ಲಿ ಪ್ರೀತಿ-ಪ್ರೇಮ ಹೇಗಿತ್ತು? ತಮ್ಮ ವಿದ್ಯಾಭ್ಯಾಸ ಯಾವ ರೀತಿ ಸಾಗಿ ಬಂತು ಎಂಬುದನ್ನು ಈ ವಿಡಿಯೋದಲ್ಲಿ ದೊಡ್ಡಣ್ಣ ವಿವರಿಸಿದ್ದಾರೆ.

‘ನಾನು ಲವ್​ ಮಾಡಿ ಮದುವೆ ಆದವನಲ್ಲ. ಮದುವೆ ಆದ ಮೇಲೆ ಲವ್​ ಮಾಡಿದೆ. ಮದುವೆ ಆಗುವ ಹುಡುಗಿಯನ್ನು ನಾನು ನೋಡಿರಲಿಲ್ಲ. ತಾಳಿ ಕಟ್ಟುವಾಗಲೇ ಮುಖ ನೋಡಿದ್ದು! ಹೆಣ್ಣು ನೋಡುವಾಗ ಹುಡುಗಿ ಚೆನ್ನಾಗಿಲ್ಲ ಅಂತ ಹೇಳಲು ಬಾಯಿ ತೆಗೆದಿದ್ದೆ. ಆಗ ಅಣ್ಣ ರಪ್​ ಅಂತ ಹೊಡೆದಿದ್ದ. ಇಂಥ ಒಳ್ಳೆಯ ಹುಡುಗಿ ಸಿಕ್ಕಿದ್ದು ನಿನ್ನ ಪುಣ್ಯ ಅಂತ ಹೇಳಿದ್ದ’ ಎಂದು ಆ ದಿನಗಳನ್ನು ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ. ‘ದೇಹದ ಸೌಂದರ್ಯ ಮುಖ್ಯವಲ್ಲ. ಆತ್ಮದ ಸೌಂದರ್ಯ ಮುಖ್ಯ. ನಾವು ಎಷ್ಟು ಅನುಸರಿಸಿಕೊಂಡು ಜೀವನ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ’ ಎಂಬುದು ದೊಡ್ಡಣ್ಣ ಅವರ ಅನುಭವದ ಮಾತುಗಳು.

ಇದನ್ನೂ ಓದಿ:

ಶಂಕರ್‌ನಾಗ್​ಗೆ ಆ್ಯಕ್ಸಿಡೆಂಟ್​ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್‌ ಶೂಟ್​ ಮಾಡಿದ್ವಿ; ದೊಡ್ಡಣ್ಣ

ವಿಷ್ಣುವರ್ಧನ್- ಅಂಬರೀಶ್ ಸ್ನೇಹ ಹೇಗಿತ್ತು?; ಹಿರಿಯ ನಟ ದೊಡ್ಡಣ್ಣ ವ್ಯಾಖ್ಯಾನಿಸಿದ್ದು ಹೀಗೆ..

Follow us
ಔಟಾದ ಹತಾಶೆಯಲ್ಲಿ ಹೆಲ್ಮೆಟ್ ಮೇಲೆ ಕೋಪ ತೋರಿದ ಕಾರ್ಲೋಸ್ ಬ್ರಾಥ್​ವೈಟ್
ಔಟಾದ ಹತಾಶೆಯಲ್ಲಿ ಹೆಲ್ಮೆಟ್ ಮೇಲೆ ಕೋಪ ತೋರಿದ ಕಾರ್ಲೋಸ್ ಬ್ರಾಥ್​ವೈಟ್
ಆಭರಣದಂಗಡಿಗೆ ನುಗ್ಗಿ ಗುಂಡಿ ಹಾರಿಸಿದ ಖದೀಮರು; ಮಾಲೀಕ ಸಾವು, ಐವರಿಗೆ ಗಾಯ
ಆಭರಣದಂಗಡಿಗೆ ನುಗ್ಗಿ ಗುಂಡಿ ಹಾರಿಸಿದ ಖದೀಮರು; ಮಾಲೀಕ ಸಾವು, ಐವರಿಗೆ ಗಾಯ
ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಬಗ್ಗೆ ವಿನಯ್ ರಾಜ್​ಕುಮಾರ್ ಮಾತು
ಚಿಕ್ಕಪ್ಪ ಪುನೀತ್ ರಾಜ್​ಕುಮಾರ್ ಬಗ್ಗೆ ವಿನಯ್ ರಾಜ್​ಕುಮಾರ್ ಮಾತು
ತನಗೆ ಕಚ್ಚಿದ್ದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ
ತನಗೆ ಕಚ್ಚಿದ್ದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ರೋಗಿ
ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕ
ಸೋರುತಿಹುದು ಕೆಎಸ್​ಆರ್​ಟಿಸಿ ಬಸ್, ಅಧಿಕಾರಿಗಳ ಅಜ್ಞಾನದಿಂದ ಎಂದ ಪ್ರಯಾಣಿಕ
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ
Daily Devotional: ದೇವರಿಗೆ ಅಲಂಕರಿಸುವ ಆಭರಣಗಳು ಹೇಗಿರಬೇಕು? ಈ ವಿಡಿಯೋ ನ
Daily Devotional: ದೇವರಿಗೆ ಅಲಂಕರಿಸುವ ಆಭರಣಗಳು ಹೇಗಿರಬೇಕು? ಈ ವಿಡಿಯೋ ನ
ಶ್ರಾವಣ ಮಾಸದ ಕೊನೆ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ ಕೊನೆ ವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸದ ಭಾನುವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶ್ರಾವಣ ಮಾಸದ ಭಾನುವಾರದ ದಿನ ಭವಿಷ್ಯ ತಿಳಿಯಿರಿ
ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್
ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್