ಮೈ ಮೇಲೆ ಜನರು ಚಪ್ಪಲಿ ಎಸೆದಾಗ ಖುಷಿಪಟ್ಟಿದ್ದ ಹಿಂದಿ ಖಳನಟ; ಇಂಟರೆಸ್ಟಿಂಗ್​ ಘಟನೆ ವಿವರಿಸಿದ ಕೀರ್ತಿರಾಜ್​

| Updated By: ಮದನ್​ ಕುಮಾರ್​

Updated on: Jun 13, 2022 | 10:08 AM

ವಿಲನ್​ ಪಾತ್ರ ಮಾಡುವವರನ್ನು ಜನರು ನೋಡುವ ರೀತಿ ಬೇರೆಯಾಗಿರುತ್ತದೆ. ಆ ಬಗ್ಗೆ ಕೀರ್ತಿರಾಜ್​ ಅವರು ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ನಟ ಕೀರ್ತಿರಾಜ್​ (Keerthiraj) ಅವರ ಅನುಭವ ಅಪಾರ. ಅಂದಾಜು 300 ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಹಲವಾರು ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪರಭಾಷೆಯ ನಟರ ಜೊತೆ ಕೆಲಸ ಮಾಡುವ ಅವಕಾಶ ಕೂಡ ಅವರಿಗೆ ಸಿಕ್ಕಿತ್ತು. ಬಾಲಿವುಡ್​ನ (Bollywood) ಖ್ಯಾತ ಖಳನಟ ಪ್ರಾಣ್ ಅವರ ಜೊತೆ ಕಳೆದ ಕೆಲವು ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ. ವಿಲನ್​ ಪಾತ್ರ ಮಾಡುವವರನ್ನು ಜನರು ಬೇರೆ ರೀತಿ ನೋಡುತ್ತಾರೆ. ಪ್ರಾಣ್​ ಅವರ ಮೇಲೆ ಒಮ್ಮೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದರು. ಆ ಘಟನೆಯನ್ನು ಕೀರ್ತಿರಾಜ್​ ಬಳಿ ಪ್ರಾಣ್ (Actor Pran)​ ಹೇಳಿಕೊಂಡಿದ್ದರು. ‘ಟಿವಿ9 ಕನ್ನಡ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಆ ಬಗ್ಗೆ ಕೀರ್ತಿರಾಜ್​ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 10:08 am, Mon, 13 June 22

Follow us on