ಜೈಲಿನಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ನಾಗರಾಜ್ ಆರೋಪ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾಥಿತ್ಯ ನೀಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಈಗ ಪವಿತ್ರಾ ಗೌಡ ಅವರಿಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸವಲತ್ತು ನೀಡಲಾಗುತ್ತಿದೆ ಎಂದು ಈ ಹಿಂದೆ ವಿಚಾರಣಾಧೀನ ಕೈದಿ ಆಗಿದ್ದ ಸಂಧ್ಯಾ ನಾಗರಾಜ್ ಆರೋಪ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾಥಿತ್ಯ ನೀಡಿದ್ದು ಈ ಮೊದಲು ಭಾರಿ ವಿವಾದಕ್ಕೆ ಕಾರಣ ಆಗಿತ್ತು. ಈಗ ಮತ್ತೋರ್ವ ಆರೋಪಿ ಪವಿತ್ರಾ ಗೌಡ (Pavitra Gowda) ಅವರಿಗೂ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಈ ಹಿಂದೆ ವಿಚಾರಣಾಧೀನ ಕೈದಿ ಆಗಿದ್ದ ಸಂಧ್ಯಾ ನಾಗರಾಜ್ ಅವರು ಆರೋಪ ಮಾಡಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಧ್ಯಾ ನಾಗರಾಜ್ ವಿರುದ್ಧವೇ ಪವಿತ್ರಾ ಗೌಡ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಸಂಧ್ಯಾ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪವಿತ್ರಾ ಗೌಡ ಅವರನ್ನು ಇನ್ನುಳಿದ ಆರೋಪಿಗಳ ರೀತಿ ನಡೆಸಿಕೊಳ್ಳುತ್ತಿಲ್ಲ. ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು 3 ಜನ ಆಳುಗಳು ಇದ್ದಾರೆ. ಜೈಲಿನ ಒಳಗೆ ಕರೆದುಕೊಂಡು ಹೋದರೆ ಅವರು ಯಾರು ಅಂತ ನಾನು ತೋರಿಸುತ್ತೇನೆ. ಅವರಿಗೆ ಸಂಬಳ ಕೊಟ್ಟಿದ್ದರ ಬಗ್ಗೆ ಮಾತನಾಡಿದ್ದು ನನ್ನ ಕಿವಿಗೆ ಬಿದ್ದಿದೆ. ಸುಮ್ಮನೆ ಆರೋಪ ಮಾಡೋಕೆ ನಾನು ಪವಿತ್ರಾ ಗೌಡಗೆ ಶತ್ರು ಅಲ್ಲ. ಜೈಲು ಸಿಬ್ಬಂದಿಗೆ ಬರುವ ಊಟವನ್ನು ಪವಿತ್ರಾಗೆ ಕೊಡುತ್ತಾರೆ’ ಎಂದು ಸಂಧ್ಯಾ ನಾಗರಾಜ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
