‘ಜನರ ಅಭಿಪ್ರಾಯದಿಂದ ಕಾರ್ತಿಕ್ ಗೆದ್ದಿದ್ದು, ಅದನ್ನು ಒಪ್ಪಿಕೊಳ್ಳಲೇಬೇಕು’; ಸಂಗೀತಾ
ಕಾರ್ತಿಕ್ ಮಹೇಶ್ ಬಿಗ್ ಬಾಸ್ ವಿನ್ ಆಗಿದ್ದಾರೆ ಅನ್ನೋದನ್ನು ಒಪ್ಪಿಕೊಳ್ಳಲು ಅನೇಕರಿಂದ ಸಾಧ್ಯವಾಗುತ್ತಿಲ್ಲ. ಈ ವಿಚಾರದ ಬಗ್ಗೆ ಸಂಗೀತಾ ಶೃಂಗೇರಿ ಅವರು ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಂಡು ಕೆಲವು ದಿನ ಕಳೆದಿದೆ. ಆದರೂ ಇದರ ಬಗ್ಗೆ ಚರ್ಚೆ ನಿಂತಿಲ್ಲ. ಕಾರ್ತಿಕ್ ಮಹೇಶ್ ವಿನ್ ಆಗಿದ್ದಾರೆ ಅನ್ನೋದನ್ನು ಒಪ್ಪಿಕೊಳ್ಳಲು ಅನೇಕರಿಂದ ಸಾಧ್ಯವಾಗುತ್ತಿಲ್ಲ. ಈ ವಿಚಾರದ ಬಗ್ಗೆ ಸಂಗೀತಾ ಶೃಂಗೇರಿ (Sangeetha Sringeri) ಅವರು ಮಾತನಾಡಿದ್ದಾರೆ. ‘ಇದು ಜನರೇ ನೀಡಿದ ತೀರ್ಪು. ಮನೆಯ ಒಳಗೆ ಇರುವಾಗ ಜನರಿಂದ ಯಾರಿಗೆ ಎಷ್ಟು ಪ್ರೀತಿ ಸಿಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಜನರು ಕೊಟ್ಟ ಅಭಿಪ್ರಾಯದಿಂದ ಕಾರ್ತಿಕ್ ಗೆದ್ದಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ ಸಂಗೀತಾ. ಸಂಗೀತಾ ಅವರು ಎರಡನೇ ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ. ಕಾರ್ತಿಕ್ ಕಪ್ ಗೆದ್ದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
