ಲಾಯರ್ ಜಗದೀಶ್ ಇದ್ದಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಜಗಳವೇ ತುಂಬಿತ್ತು. ಈಗ ಆ ಜಾಗದಲ್ಲಿ ನಗು ಹರಡಲು ಹನುಮಂತ ಬಂದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಅವರು ಆರಂಭದಲ್ಲೇ ನಗುವಿನ ಮಳೆ ಸುರಿಸುತ್ತಿದ್ದಾರೆ. ಹನುಮಂತ ಯಾರು ಎಂಬುದು ಬಹುತೇಕ ಎಲ್ಲ ಕಿರುತೆರೆ ವೀಕ್ಷಕರಿಗೆ ಗೊತ್ತು. ಆದರೂ ಸಹ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಅವರು ಮತ್ತೊಮ್ಮೆ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಆ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಹನುಮಂತನ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.