ಕಬ್ಬಿಣದ ಅದಿರು ಅಕ್ರಮ ಸಂಗ್ರಹ ಆರೋಪ ಸತೀಶ್ ಸೈಲ್ ಮೇಲೆ 2009ರಿಂದ ಇದೆ: ಪರಮೇಶ್ವರ್

|

Updated on: Oct 25, 2024 | 12:27 PM

ಮುಡಾ ಹಗರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಕಾನೂನು ಚೌಕಟ್ಟನಲ್ಲಿ ಅದಕ್ಕೆ ಅವಕಾಶವಿದೆ, ಹಾಗಾಗಿ ಸಿಂಗಲ್ ಬೆಂಚ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಡಬಲ್ ಬೆಂಚ್​ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ನಿನ್ನೆ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಪ್ರಕರಣ 2009ರಿಂದ ನಡೆದಿದ್ದು ಹಿಂದೆಯೂ ಅವರನ್ನು ಅರೆಸ್ಟ್ ಮಾಡಲಾಗಿತ್ತು ಎಂದು ಹೇಳಿದರು. ಅಕ್ರಮ ಗಣಿಕೆಗಾರಿಕೆ ನಡೆಸಿದ ಮತ್ತು ಬೆಳೆಕೇರಿ ಪೋರ್ಟ್​ನಲ್ಲಿ ಲಕ್ಷಾಂತರ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ಸಂಗ್ರಹಿಟ್ಟ ಆರೋಪ ಅವರ ಮೇಲಿದೆ. ಪ್ರಕರಣದಲ್ಲಿ ವಿಚಾರಣೆ ಮುಂದುವರಿಸಿರುವ ನ್ಯಾಯಾಲಯವು ಸೈಲ್ ಮತ್ತು ಇತರ 9 ಜನರ ಬಂಧನಕ್ಕೆ ಆದೇಶ ನೀಡಿದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋರ್ಟ್ ಆದೇಶಿಸಿದರೆ ಬಸನಗೌಡ ಯತ್ನಾಳ್​ರನ್ನು ಬಂಧಿಸಲಾಗುವುದು: ಪರಮೇಶ್ವರ್

Follow us on