‘ನಾನು ನಿರ್ದೇಶಕನಾಗಲು ಅವನೇ ಕಾರಣ’; ಜೀವದ ಗೆಳೆಯನ ನೆನೆದ ತರುಣ್ ಸುಧೀರ್

Updated on: Sep 12, 2025 | 10:47 AM

Tharun Sudhir: ತರುಣ್ ಸುಧೀರ್ ಅವರು ಕನ್ನಡದ ಖ್ಯಾತ ನಿರ್ದೇಶಕರು. ಅವರು ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿ ಫೇಮಸ್ ಆಗಿದ್ದಾರೆ. ಈಗ ತರುಣ್ ಸುಧೀರ್ ಅವರು ಒಂದು ವಿಚಾರವನ್ನು ಹೇಳಿಕೊಂಡಿದ್ದಾರೆ. ತಾವು ನಿರ್ದೇಶಕನಾಗಲು ಶರಣ್ ಕಾರಣ ಎಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ತರುಣ್ ಸುಧೀರ್ ಅವರು ‘ಮಹಾನಟಿ 2’ ಶೋನಲ್ಲಿ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಈಗ ‘ನಾವು ನಮ್ಮವರು’ ಹಾಗೂ ‘ಮಹಾನಟಿ’ ಶೋನ ಮಹಾ ಸಂಗಮ ನಡೆದಿದೆ. ಇದಕ್ಕೆ ಶರಣ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಶರಣ್ ಬದುಕಿನ ಪಯಣವನ್ನು ನೆನಪಿಸಿಕೊಳ್ಳಲಾಯಿತು. ಆಗ ತರುಣ್ ಸುಧೀರ್ ಅವರು ಶರಣ್ ಅವರನ್ನು ಹೊಗಳಿದರು. ‘ನನ್ನಲ್ಲಿ ಒಬ್ಬ ನಿರ್ದೇಶಕನ ಗುರುತಿಸಿದ್ದು ಶರಣ್’ ಎಂದರು ತರುಣ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More