ಪ್ರಸಿದ್ಧ ವ್ಯಕ್ತಿಯ ಹುಟ್ಟು ಹಬ್ಬಕ್ಕೆ ಕೆಜಿ ಗಟ್ಟಲೇ ಕೇಕ್ ತಂದು ಕಟ್ ಮಾಡಿ ಆಚರಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿ ಗೂಳಿಯ ಜನ್ಮದಿನಕ್ಕೆ 20 ಕೆಜಿ ಕೇಕ್ ತಂದು ಹುಟ್ಟಿದ ಹಬ್ಬ ಆಚರಿಸಲಾಗಿದೆ. ಹೌದು, ಶೀರಿಹಳ್ಳಿ ತಾಂಡದ ಶಂಕರನಾಯ್ಕ ಎಂಬುವರ ನಾಯಕರ 200 ಎನ್ನುವ ಗೂಳಿಯ ಜನ್ಮದಿನಕ್ಕೆ 20 ಕೆಜಿಯ ಕೇಕ್ ಕತ್ತರಿಸಿ ಅದ್ದೂರಿಯಾಗಿ ಹೋರಿಯ ಹುಟ್ಟುಹಬ್ಬ ಆಚರಿಸಲಾಗಿದೆ. ನಾಯಕರ ಗೂಳಿ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಿಸಲಾಗಿದೆ. ನಾಯಕರ ಗೂಳಿ 200 ಮಲೆನಾಡಿನ ಜನಪದ ಕ್ರೀಡೆ ಹೋರಿ ಹಬ್ಬದ ಮುಖಾಂತರ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದೆ.
Published On - 10:39 am, Fri, 18 October 24