ವಿಡಿಯೋ: ಅಪ್ಪನ ಮುಂದೆ ತನ್ನ ಲವ್ ಸ್ಟೂರಿ ಹೇಳಲು ಹಿಂಜರಿದ ನಟ ಶ್ರೇಯಸ್ ಮಂಜು
ಕೆ ಮಂಜು-ಶ್ರೇಯಸ್ ಮಂಜು

ವಿಡಿಯೋ: ಅಪ್ಪನ ಮುಂದೆ ತನ್ನ ಲವ್ ಸ್ಟೂರಿ ಹೇಳಲು ಹಿಂಜರಿದ ನಟ ಶ್ರೇಯಸ್ ಮಂಜು

Updated on: Mar 31, 2023 | 10:51 PM

ಅಪ್ಪನ ಮುಂದೆ ತಮ್ಮ ಕಾಲೇಜು ಲವ್ ಸ್ಟೋರಿ ಬಗ್ಗೆ ಹೇಳಲು ಹಿಂದೇಟು ಹಾಕಿದ್ದಾರೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು.

ನಿರ್ಮಾಪಕ ಕೆ.ಮಂಜು (K Manju) ಪುತ್ರ ಶ್ರೇಯಸ್ (Shreyas Manju) ನಟಿಸಲಿರುವ ಹೊಸ ಸಿನಿಮಾ ದಿಲ್ ದಾರ್ ಇಂದು ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನೆರವೇರಿದ್ದು, ನಟ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಕಾಲೇಜು ಲವ್ ಸ್ಟೂರಿಯ ಬಗ್ಗೆ ಶ್ರೇಯಸ್ ನೆನಪಿಸಿಕೊಂಡಿದ್ದಾರೆ. ಆದರೆ ಅಲ್ಲಿಯೇ ಕೂತಿದ್ದ ತಮ್ಮ ತಂದೆ ನಿರ್ಮಾಪಕ ಕೆ.ಮಂಜು ಎದುರು ಲವ್ ಸ್ಟೋರಿ ಹೇಳಲು ಹಿಂಜರಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 31, 2023 10:49 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More