Siddaramaiah’s elation: ಐದು ಗ್ಯಾರಂಟಿಗಳ ಅನುಷ್ಠಾನವನ್ನು ಘೋಷಿಸಿ ಆಚೆ ಬಂದ ಸಿದ್ದರಾಮಯ್ಯ ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ!
ಕಾರು ಹತ್ತಿದ ಬಳಿಕ ಅವರು ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.
ಬೆಂಗಳೂರು: ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ (5 guarantees) ಅನುಷ್ಠಾನವನ್ನು ಘೋಷಿಸಿದ ಬಳಿಕ ವಿಧಾನ ಸೌಧದಿಂದ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ! ಕಳೆದ ಎರಡು ವಾರಗಳಿಂದ ಅವರು ಮುಖಗಂಟಿಕ್ಕಿಕೊಂಡಿದ್ದರು. ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿಡುಕುತ್ತಾ ಉತ್ತರಿಸುತ್ತಿದ್ದರು. ಆದರೆ ಇಂದು ಸುದೀರ್ಘ ಸಂಪುಟ ಸಭೆಯ (cabinet meeting) ನಂತರ ಸುದ್ದಿಗೋಷ್ಠಿ ನಡೆಸಿ ವಿಧಾನಸೌಧದಿಂದ ಹೊರಬಂದಾಗ ಅವರ ಮುಖದಲ್ಲಿ ಮಂದಹಾಸ, ನಡಿಗೆಯಲ್ಲಿ ಆಡಿದ್ದನ್ನು ಮಾಡಿ ತೋರಿಸಿದ ಗತ್ತು! ಕಾರು ಹತ್ತಿದ ಬಳಿಕ ಅವರು ಚುನಾವಣಾ ಪ್ರಚಾರದಲ್ಲಿ ಮಾಡುತ್ತಿದ್ದ ಹಾಗೆ, ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ
