Siddaramaiah’s elation: ಐದು ಗ್ಯಾರಂಟಿಗಳ ಅನುಷ್ಠಾನವನ್ನು ಘೋಷಿಸಿ ಆಚೆ ಬಂದ ಸಿದ್ದರಾಮಯ್ಯ ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ!
ಕಾರು ಹತ್ತಿದ ಬಳಿಕ ಅವರು ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.
ಬೆಂಗಳೂರು: ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ (5 guarantees) ಅನುಷ್ಠಾನವನ್ನು ಘೋಷಿಸಿದ ಬಳಿಕ ವಿಧಾನ ಸೌಧದಿಂದ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ! ಕಳೆದ ಎರಡು ವಾರಗಳಿಂದ ಅವರು ಮುಖಗಂಟಿಕ್ಕಿಕೊಂಡಿದ್ದರು. ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿಡುಕುತ್ತಾ ಉತ್ತರಿಸುತ್ತಿದ್ದರು. ಆದರೆ ಇಂದು ಸುದೀರ್ಘ ಸಂಪುಟ ಸಭೆಯ (cabinet meeting) ನಂತರ ಸುದ್ದಿಗೋಷ್ಠಿ ನಡೆಸಿ ವಿಧಾನಸೌಧದಿಂದ ಹೊರಬಂದಾಗ ಅವರ ಮುಖದಲ್ಲಿ ಮಂದಹಾಸ, ನಡಿಗೆಯಲ್ಲಿ ಆಡಿದ್ದನ್ನು ಮಾಡಿ ತೋರಿಸಿದ ಗತ್ತು! ಕಾರು ಹತ್ತಿದ ಬಳಿಕ ಅವರು ಚುನಾವಣಾ ಪ್ರಚಾರದಲ್ಲಿ ಮಾಡುತ್ತಿದ್ದ ಹಾಗೆ, ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ

ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ

ಕ್ರೆಡಿಟ್ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ ವಿರುದ್ಧ ಜೋಶಿ ಕಿಡಿ

ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯ ಕಣ್ತುಂಬಿಕೊಂಡ ಮೋದಿ
