AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Who would be CM? ದೆಹಲಿ ತಲುಪಿದ ಬಳಿಕ ಸಿದ್ದರಾಮಯ್ಯ ಸಿಡಿಮಿಡಿತನ ಪ್ರದರ್ಶಿಸಿದ್ದು ಹತಾಷೆಯಿಂದಾಗಿಯೇ?

Who would be CM? ದೆಹಲಿ ತಲುಪಿದ ಬಳಿಕ ಸಿದ್ದರಾಮಯ್ಯ ಸಿಡಿಮಿಡಿತನ ಪ್ರದರ್ಶಿಸಿದ್ದು ಹತಾಷೆಯಿಂದಾಗಿಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: May 15, 2023 | 6:47 PM

Share

ಸಿಎಂ ಹುದ್ದೆ ಕೈತಪ್ಪುವ ಲಕ್ಷಣ ಸಿದ್ದರಾಮಯ್ಯಗೆ ಕಾಣಿಸಿದೆಯೇ? ಇಲ್ಲಿ ಬೆಂಗಳೂರಲ್ಲಿ ಶಿವಕುಮಾರ್ ಕೂಡ ಸಿಡಿಮಿಡಿತನ ಪ್ರದರ್ಶಿಸುತ್ತಿದ್ದಾರೆ.

ದೆಹಲಿ: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯರನ್ನು (Siddaramaiah) ದೆಹಲಿಗೆ ಕರೆಸಿದ್ದು ನಿಮಗೆ ಗೊತ್ತಿದೆ. ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಹ ಕರೆಸಿದೆ ಅದರೆ ಪ್ರಾಯಶಃ ರಾತ್ರಿ ಫ್ಲೈಟ್ ಹತ್ತಬಹುದು. ದೆಹಲಿಗೆ ಹೊರಡುವಾಗಲೇ ಸಿದ್ದರಾಮಯ್ಯ ಸ್ವಲ್ಪ ಅನ್ಯಮನಸ್ಕರಂತೆ ಕಂಡರು. ಆದರೆ ದೆಹಲಿ ತಲುಪಿದಾಗ ಅದು ಸಿಡಿಮಿಡಿಯಾಗಿ ಪರಿವರ್ತನೆಯಾಗಿತ್ತು. ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು (media persons) ಅವರನ್ನು ಸುತ್ತುವರಿದರು. ಆದರೆ ಸಿದ್ದರಾಮಯ್ಯ ಯಾರೊಂದಿಗೂ ಮಾತಾಡಲಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದರೂ, ಯಾರೋ ಒಬ್ಬರಿಗೆ ವ್ಹೇರ್ ಈಸ್ ದಿ ಕಾರ್ ಅಂತ ಕೇಳಿ ರೀ ದಾರಿ ಬಿಡ್ರೀ ಅನ್ನುತ್ತಾ, ಕೋಪದಿಂದಲೇ ಕಾರು ಹತ್ತಿದರು. ಸಿಎಂ ಹುದ್ದೆ ಕೈತಪ್ಪುವ ಲಕ್ಷಣ ಅವರಿಗೆ ಕಾಣಿಸಿದೆಯೇ? ಇರಬಹುದು. ಅದರೆ ಇಲ್ಲಿ ಬೆಂಗಳೂರಲ್ಲಿ ಶಿವಕುಮಾರ್ ಕೂಡ ಸಿಡಿಮಿಡಿತನ ಪ್ರದರ್ಶಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ