Sign In

By signing in or creating an account, you agree with Associated Broadcasting Company's Terms & Conditions and Privacy Policy.

Former minister takes on CM; ಜಾತಿ ಜನಗಣತಿಗೆ ನಡೆಸಿದ ಸಿದ್ದರಾಮಯ್ಯ ಸಮಿತಿ ನೀಡಿದ ವರದಿಯನ್ನು ಸ್ವೀಕರಿಸಲೂ ಇಲ್ಲ: ಬಿ ಶ್ರೀರಾಮುಲು

Former minister takes on CM; ಜಾತಿ ಜನಗಣತಿಗೆ ನಡೆಸಿದ ಸಿದ್ದರಾಮಯ್ಯ ಸಮಿತಿ ನೀಡಿದ ವರದಿಯನ್ನು ಸ್ವೀಕರಿಸಲೂ ಇಲ್ಲ: ಬಿ ಶ್ರೀರಾಮುಲು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 08, 2023 | 7:12 PM

ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವಂದ್ವ ನೀತಿ ಅನುಸರಿಸುತ್ತಾರೆ, ಅಧಿಕಾರವಿದ್ದಾಗ ಒಂದು ಇಲ್ಲದಾಗ ಮತ್ತೊಂದು ಮಾತಾಡುತ್ತಾರೆ ಎಂದು ಶ್ರೀರಾಮುಲು ಹೇಳಿದರು.

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತು ಬಹಳ ದಿನಗಳ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಬಿ ಶ್ರೀರಾಮುಲು (B Sriramulu) ರಾಜ್ಯ ಸರ್ಕಾರ ಮೀಸಲಾತಿ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ, ಜನ ಮತ್ತು ತಾವು ಅದನ್ನು ಯಾವ ಕಾರಣಕ್ಕೂ ಸಹಿಸಲ್ಲ, ಪ್ರಾಣ ಕೊಟ್ಟೇವು ಆದರೆ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ದ್ವಂದ್ವ ನೀತಿ ಅನುಸರಿಸುತ್ತಾರೆ, ಅಧಿಕಾರವಿದ್ದಾಗ ಒಂದು ಇಲ್ಲದಾಗ ಮತ್ತೊಂದು ಮಾತಾಡುತ್ತಾರೆ ಎಂದು ಶ್ರೀರಾಮುಲು ಹೇಳಿದರು. ಜಾತಿ ಜನಗಣತಿ (caste census) ವಿಚಾರ ಮಾತಾಡಿದ ಅವರು ಸಿದ್ದರಾಮಯ್ಯ ತಾವೇ ಅದಕ್ಕೆ ಆದೇಶ ನೀಡಿ ಸಮಿತಿಯನ್ನೂ ರಚಿಸಿ ಗಣತಿ ಮಾಡಿಸಿದ್ದರು. ಆದರೆ, ನಂತರ ಸಮಿತಿ ಸಲ್ಲಿಸಿದ ವರದಿಯನ್ನು ಅವರು ಸ್ವೀಕರಿಸಲೂ ಇಲ್ಲ ಎಂದು ಮಾಜಿ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ