ಕ್ಲೋಸಪ್ನಲ್ಲಿ ನೋಡಿ ಮಿಸ್ ಇಂಡಿಯಾ! ಮಿಸ್ ವರ್ಲ್ಡ್ ನನ್ನ ಮುಂದಿನ ಗುರಿ ಎಂದ ಸಿನಿ ಶೆಟ್ಟಿ
ಮಿಸ್ ಇಂಡಿಯಾ ಆದ ಬಳಿಕ ಸಿನಿ ಶೆಟ್ಟಿ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದು ಉಡುಪಿಯತ್ತ ಪಯಣ ಬೆಳೆಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಸಿನಿಶೆಟ್ಟಿ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಉಡುಪಿ ಜಿಲ್ಲೆ ಇನ್ನಂಜೆ ಮೂಲದವರಾದ ಸಿನಿಶೆಟ್ಟಿ ನೋಡಲು ನೂರಾರು ಜನರು ಆಗಮಿಸಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಮಿಸ್ ಇಂಡಿಯಾ ಆದ ಬಳಿಕ ಸಿನಿ ಶೆಟ್ಟಿ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದು ಉಡುಪಿಯತ್ತ ಪಯಣ ಬೆಳೆಸಿದ್ದಾರೆ. ಮಿಸ್ ಇಂಡಿಯಾ ಸಿನಿಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದರು.
Published on: Jul 18, 2022 07:14 PM
Loading...
Unable to load recommendations.
Follow Us

