ಶಿರಸಿ ಪೊಲೀಸರ ಭರ್ಜರಿ ಬೇಟೆ: 9 ಅಂತರ್​ ಜಿಲ್ಲಾ ಕಳ್ಳರ ಬಂಧನ, 13,80,000 ರೂ. ನಗದು, 2 ಕಾರು, 12 ಮೊಬೈಲ್​ ಜಪ್ತಿ

| Updated By: ರಮೇಶ್ ಬಿ. ಜವಳಗೇರಾ

Updated on: Nov 26, 2022 | 10:48 PM

ಬೆಳಗಾವಿಯಿಂದ ಬನವಾಸಿಗೆ ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ 50 ಲಕ್ಷ ಹಣ ದರೋಡೆ ಮಾಡಿದ್ದ ಖದೀಮರು ಇದೀಗ ಖಾಕಿ ಬಲೆ ಬಿದ್ದಿದ್ದಾರೆ.

ಶಿರಸಿ: ಬೆಳಗಾವಿಯಿಂದ ಬನವಾಸಿಗೆ ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ 50 ಲಕ್ಷ ಹಣ ದರೋಡೆ ಮಾಡಿದ್ದ ಖದೀಮರು ಇದೀಗ ಖಾಕಿ ಬಲೆ ಬಿದ್ದಿದ್ದಾರೆ. ಬೆಳಗಾವಿಗೆ ಸೈಟ್​ ಖರೀದಿಸಲು ತೆರಳಿ ಹೋಗಿ ಬರುತ್ತಿದ್ದಾಗ ಖದೀಮರು ದಾಳಿ ಮಾಡಿದ್ದು, ಕಾರಿನಲ್ಲಿದ್ದ 50 ಲಕ್ಷ ರೂ, ದೋಚಿಕೊಂಡು ಹೋಗಿದ್ದರು.

ಈ ಪ್ರಕರಣದ ಬೆನ್ನತ್ತಿದ್ದ ಶಿರಸಿ ಪೊಲೀಸರು, 9 ಅಂತರ್​ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಶಿವಮೊಗ್ಗ, ಚಿಕ್ಕಮಗಳೂರು, ಭಟ್ಕಳ ಮೂಲದವರು. ಇನ್ನು ಬಂಧಿತರಿಂದ 13,80,000 ರೂ. ನಗದು 2 ಕಾರು, 12 ಮೊಬೈಲ್​ ಜಪ್ತಿ ಮಾಡಿದ್ದಾರೆ.

Follow us on