ಶ್ರೀನಗರದಲ್ಲಿ ಎಚ್ಚೆತ್ತ ಪೊಲೀಸರಿಂದ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ
ಧ್ವನಿವರ್ಧಕಗಳಲ್ಲದೆ ರಸ್ತೆಯ ಬದಿಗಿರುವ ಖಾಲಿ ಗೋಡೆಗಳ ಮೇಲೂ ಶ್ರೀನಗರದ ನಿವಾಸಿಗಳಿಗೆ ಉಗ್ರರು, ಅವರ ಸಂಘಟನೆಗಳು ಮತ್ತು ಅವರ ಬಗ್ಗೆ ಸಹಾನುಭೂತಿ ಇರುವವರ ಬಗ್ಗ್ಗೆ ಎಚ್ಚರದಿಂದ ಇರುವಂತೆ ಸೂಚಿಸುವ ಪೋಸ್ಟರ್ ಮತ್ತ್ತ ಹ್ಯಾಂಡ್ ಬಿಲ್ಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಗುತ್ತಿದೆ. ನಾವು ಈಗಅಗಲೇ ವರದಿ ಮಾಡಿರುವ ಹಾಗೆ ಉಗ್ರರಿಗೆ ನೆರವಾದ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಶ್ರೀನಗರ, ಏಪ್ರಿಲ್ 30: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಭಾರತೀಯರನ್ನು ಇನ್ನಿಲ್ಲದಂತೆ ಒಗ್ಗೂಡಿಸಿದೆ. ಆ ರಾಜ್ಯದಲ್ಲಂತೂ ಉಗ್ರಗಾಮಿಗಳ ವಿರುದ್ಧ ಕಟ್ಚೆಚ್ಚರ ವಹಿಸಲಾಗುತ್ತಿದೆ. ರಾಜಧಾನಿ ಶ್ರೀನಗರದಲ್ಲಿ (Srinagar) ವಾಸವಾಗಿರುವ ಜನ ಇತ್ತೆಹಾದ್ ಅಲ್ ಮುಸ್ಲಿಮೀನ್ ಮತ್ತು ಆವಾಮಿ ಆ್ಯಕ್ಷನ್ ಕಮಿಟಿ ಜೊತೆ ಯಾವುದೆ ರೀತಿಯ ಸಂಬಂಧ ಇಟ್ಟುಕೊಳ್ಳಬಾರದೆಂದು ಶ್ರೀನಗರ ಪೊಲೀಸ್ ನಗರದಾದ್ಯಂತ ಧ್ವನಿವರ್ಧಕಗಳ ಮೂಲಕ ಸಾರುತ್ತಿದೆ. ಒಂದು ವೇಳೆ ಈ ಸಂಘಟನೆಗಳೊಂದಿಗೆ ಸಂಬಂಧ ಇದ್ದರೂ ಅದನ್ನು ಮುರಿದುಕೊಳ್ಳವಂತೆ ಸೂಚಿಸಲಾಗುತ್ತಿದೆ.
ಇದನ್ನೂ ಓದಿ: ಯುದ್ಧಕ್ಕೆ ಪ್ರಚೋದನೆ: ಪಾಕ್ನಿಂದ ಗಡಿಯಲ್ಲಿ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತಿದಾಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ