AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀನಗರದಲ್ಲಿ ಎಚ್ಚೆತ್ತ ಪೊಲೀಸರಿಂದ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಶ್ರೀನಗರದಲ್ಲಿ ಎಚ್ಚೆತ್ತ ಪೊಲೀಸರಿಂದ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 30, 2025 | 5:55 PM

ಧ್ವನಿವರ್ಧಕಗಳಲ್ಲದೆ ರಸ್ತೆಯ ಬದಿಗಿರುವ ಖಾಲಿ ಗೋಡೆಗಳ ಮೇಲೂ ಶ್ರೀನಗರದ ನಿವಾಸಿಗಳಿಗೆ ಉಗ್ರರು, ಅವರ ಸಂಘಟನೆಗಳು ಮತ್ತು ಅವರ ಬಗ್ಗೆ ಸಹಾನುಭೂತಿ ಇರುವವರ ಬಗ್ಗ್ಗೆ ಎಚ್ಚರದಿಂದ ಇರುವಂತೆ ಸೂಚಿಸುವ ಪೋಸ್ಟರ್ ಮತ್ತ್ತ ಹ್ಯಾಂಡ್ ಬಿಲ್​ಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಗುತ್ತಿದೆ. ನಾವು ಈಗಅಗಲೇ ವರದಿ ಮಾಡಿರುವ ಹಾಗೆ ಉಗ್ರರಿಗೆ ನೆರವಾದ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಶ್ರೀನಗರ, ಏಪ್ರಿಲ್ 30: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಭಾರತೀಯರನ್ನು ಇನ್ನಿಲ್ಲದಂತೆ ಒಗ್ಗೂಡಿಸಿದೆ. ಆ ರಾಜ್ಯದಲ್ಲಂತೂ ಉಗ್ರಗಾಮಿಗಳ ವಿರುದ್ಧ ಕಟ್ಚೆಚ್ಚರ ವಹಿಸಲಾಗುತ್ತಿದೆ. ರಾಜಧಾನಿ ಶ್ರೀನಗರದಲ್ಲಿ  (Srinagar) ವಾಸವಾಗಿರುವ ಜನ ಇತ್ತೆಹಾದ್ ಅಲ್ ಮುಸ್ಲಿಮೀನ್ ಮತ್ತು ಆವಾಮಿ ಆ್ಯಕ್ಷನ್ ಕಮಿಟಿ ಜೊತೆ ಯಾವುದೆ ರೀತಿಯ ಸಂಬಂಧ ಇಟ್ಟುಕೊಳ್ಳಬಾರದೆಂದು ಶ್ರೀನಗರ ಪೊಲೀಸ್ ನಗರದಾದ್ಯಂತ ಧ್ವನಿವರ್ಧಕಗಳ ಮೂಲಕ ಸಾರುತ್ತಿದೆ. ಒಂದು ವೇಳೆ ಈ ಸಂಘಟನೆಗಳೊಂದಿಗೆ ಸಂಬಂಧ ಇದ್ದರೂ ಅದನ್ನು ಮುರಿದುಕೊಳ್ಳವಂತೆ ಸೂಚಿಸಲಾಗುತ್ತಿದೆ.

ಇದನ್ನೂ ಓದಿ: ಯುದ್ಧಕ್ಕೆ ಪ್ರಚೋದನೆ: ಪಾಕ್​ನಿಂದ ಗಡಿಯಲ್ಲಿ ಗುಂಡಿನ ದಾಳಿ, ಭಾರತೀಯ ಸೇನೆಯಿಂದ ಪ್ರತಿದಾಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ