ತಾನಿನ್ನೂ ಬಿಜೆಪಿ ಶಾಸಕನೆಂದು ಹೇಳುವ ಸೋಮಶೇಖರ್ ಅವರಲ್ಲಿ ಪಕ್ಷದ ಬಗ್ಗೆ ಅಸಮಾಧಾನ ಮಡುಗಟ್ಟಿದೆ!
ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು.
ಬೆಂಗಳೂರು: ಬಿಜೆಪಿ ಶಾಸಕರದ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಪಕ್ಷ ತೊರೆದು ಕಾಂಗ್ರೆಸ್ ಸೇರುವುದು ಕ್ರಮೇಣವಾಗಿ ಖಚಿತವಾಗುತ್ತಿದೆ. ಅವರಿಬ್ಬರು ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದ ಸೋಮಶೇಖರ್ ತಾವು ಈಗಲೂ ಬಿಜೆಪಿ ಶಾಸಕ ಅಂತ ಹೇಳುತ್ತಾರಾದರೂ, ಪಕ್ಷ ಮತ್ತು ಅದರ ನಾಯಕರ ವಿರುದ್ಧ ಕೇವಲ ಅಸಮಾಧಾನ ಮಾತ್ರ ಹೊರಹಾಕುತ್ತಾರೆ. ಬಿಜೆಪಿ ಸೇರಿದಾಗ ವಾತಾವರಣ ತಿಳಿ ಮತ್ತು ಸಹ್ಯವಾಗಿತ್ತು. ಆದರೆ ಕ್ರಮೇಣ ತಮ್ಮನ್ನು ಹೊರಗಿನವನಂತೆ ಪರಿಗಣಿಸುವುದು ಶುರುವಾಯಿತು, ಚುನಾವಣೆಗೆ ಮೊದಲು ಮತ್ತು ನಂತರ ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ, ವಾಪಸ್ಸು ಕಾಂಗ್ರೆಸ್ ಹೋಗುತ್ತಾನೆ ಅಂತ ಸುಳ್ಳು ಹರಿಬಿಡಲಾಗುತ್ತಿತ್ತು ಮತ್ತು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಸೋಮಶೇಖರ್ ಹೇಳಿದರು. ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆಯೂ ಸೋಮಶೇಖರ್ ಅಸಮಾಧಾನ ಹೊರಹಾಕಿದರು. ಅವರು ಬಗ್ಗೆ ಮೊನ್ನೆ ಹಾವೇರಿಯಲ್ಲಿ ಬಿಸಿ ಪಾಟೀಲ್ ಹೇಳಿರೋದು ಸತ್ಯ ಎಂದು ಸೋಮಶೇಖರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ

ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ

ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ

ಕೋರ್ಟ್ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
