ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಲು ಇದು ಸುದಿನ! 12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
2026 ಜುಲೈ 21, ಮಂಗಳವಾರದ ಪಂಚಾಂಗ ವಿವರಗಳನ್ನು ಹಾಗೂ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ‘ಟಿವಿ9’ ಕನ್ನಡ ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಪರಾಭವನಾಮ ಸಂವತ್ಸರ, ಆಷಾಢ ಮಾಸದ ಅಷ್ಟಮಿ, ಚಿತ್ತಾ ನಕ್ಷತ್ರ, ರಾಹುಕಾಲ ಹಾಗೂ ಸಂಕಲ್ಪ ಕಾಲದ ಮಹತ್ವವನ್ನು ವಿವರಿಸಿದ್ದು, ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗುವ ದಿನದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು 2026ರ ಜುಲೈ 21, ಮಂಗಳವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷದ ಅಷ್ಟಮಿ, ಚಿತ್ತಾ ನಕ್ಷತ್ರ, ಸಿದ್ಧ ಯೋಗ ಮತ್ತು ವಣಿಕ ಕರಣ ಇರಲಿದೆ. ಈ ದಿನದ ರಾಹುಕಾಲವು ಮಧ್ಯಾಹ್ನ 3 ಗಂಟೆ 26 ನಿಮಿಷದಿಂದ ಸಂಜೆ 5 ಗಂಟೆ 11 ನಿಮಿಷದ ತನಕ ಇರುತ್ತದೆ. ಇನ್ನು ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಬೆಳಗ್ಗೆ 10 ಗಂಟೆ 50 ನಿಮಿಷದಿಂದ ಮಧ್ಯಾಹ್ನ 12 ಗಂಟೆ 25 ನಿಮಿಷದ ತನಕ ವ್ಯಾಪಿಸಿದೆ. ಇದು ಒಂದು ಮಹಾ ಪರ್ವ ದಿನವಾಗಿದೆ ಎಂದು ‘ಟಿವಿ9’ ಕನ್ನಡ ಡಿಜಿಟಲ್ ವಾಹಿನಿಯ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಲ್ಲದೆ, ಮೇಷಾದಿ 12 ರಾಶಿಗಳ ದಿನ ಭವಿಷ್ಯವನ್ನೂ ವಿವರಿಸಿದ್ದಾರೆ.
Loading...
Unable to load recommendations.
Follow Us
