ಇಂದು (ನವೆಂಬರ್ 16) ವಿಶ್ವ ಸಿಒಪಿಡಿ ಡೇ ಆಚರಣೆ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಚರಿಸಲಾಗಿದೆ. ನಟ ಸುಂದರ್ ರಾಜ್ (Sundar Raj), ಉಮೇಶ್ ಬಣಕಾರ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸುಂದರ್ ರಾಜ್ ಅವರು ಮಾತನಾಡುತ್ತಾ ಅಂಬರೀಷ್ (Ambareesh) ಅವರಿಗೆ ತೀವ್ರ ಅನಾರೋಗ್ಯ ಉಂಟಾದಾಗ ಏನಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ವೈದ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ.