ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ; ಕನ್ನಡದಲ್ಲೇ ಮಾತು ಆರಂಭಿಸಿದ ನಟಿ
ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಇಂದು (ಫೆಬ್ರವರಿ 10) ಬೆಂಗಳೂರಿಗೆ ಆಗಮಿಸಿದ್ದರು. ಅವರು ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ರಾಯಭಾರಿ ಆಗಿದ್ದಾರೆ. ತಮನ್ನಾ ಭಾಟಿಯಾ ಅವರು ಕನ್ನಡದಲ್ಲಿ ಮಾತು ಆರಂಭಿಸಿದರು ಅನ್ನೋದು ವಿಶೇಷ ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ‘ಮೈಸೂರು ಸ್ಯಾಂಡಲ್ ಸೋಪ್’ನ ರಾಯಭಾರಿಯಾಗಿದ್ದಾರೆ. ಇಂದಿನಿಂದ ಎರಡು ವರ್ಷಗಳವರೆಗೆ ಅವರು ಈ ಬ್ರ್ಯಾಂಡ್ನ ರಾಯಭಾರಿ ಆಗಲಿದ್ದಾರೆ. ಇಂದು (ಫೆಬ್ರವರಿ 10) ಬೆಂಗಳೂರಿಗೆ ಆಗಮಿಸಿದ ಅವರು, ಅದ್ದೂರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ತಮನ್ನಾ ಭಾಟಿಯಾ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು ಅನ್ನೋದು ವಿಶೇಷ. ‘ಎಲ್ಲರಿಗೂ ನಮಸ್ಕಾರ’ ಎಂದು ಹೇಳಿದ ತಮನ್ನಾ ನಂತರ ಆಂಗ್ಲ ಭಾಷೆಯಲ್ಲಿ ಮಾತು ಮುಂದುವರಿಸಿದರು. ತಮನ್ನಾ ಭಾಟಿಯಾ ಅವರಿಗೆ ಈ ದಿನ ತುಂಬಾನೇ ವಿಶೇಷವಂತೆ. ವೃತ್ತಿ ಜೀವನದಲ್ಲಿ ಇಷ್ಟು ವರ್ಷ ಒಂದು ಲೆಕ್ಕ ಆದರೆ, ಇನ್ನುಮುಂದೆ ಮತ್ತೊಂದು ರೀತಿಯ ಲೆಕ್ಕ’ ಎಂದು ತಮನ್ನಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
