ಬಳ್ಳಾರಿ ಜೈಲಿನಲ್ಲಿರುವ ಕೈದಿಗಳ ಆರೋಗ್ಯ ತಪಾಸಣೆಗೆ ಬಂದ ವಿಮ್ಸ್ ಡಾಕ್ಟರ್​​​ಗಳು

|

Updated on: Oct 09, 2024 | 12:53 PM

ಬಳ್ಳಾರಿ ಕೇಂದ್ರೀಯ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೆಂದು ವೈದ್ಯರು ಹೇಳಿದ್ದಾರೆ. ಜ್ಯೂನಿಯರ್ ವೈದ್ಯರು ಅಥವಾ ಇಂಟರ್ನ್​ಗಳು ದರ್ಶನ್ ಸಮಸ್ಯೆಗೆ ಪರಿಹಾರ ಒದಗಿಸಬಲ್ಲರೆ ಅನ್ನೋದೇ ಮುಖ್ಯ ಪ್ರಶ್ನೆ.

ಬಳ್ಳಾರಿ: ಜೈಲಿನಲ್ಲಿರುವ ಕೈದಿಗಳ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಯುತ್ತಿರುತ್ತದೆ. ನಟ ದರ್ಶನ್ ರನ್ನು ಇರಿಸಿರುವ ಬಳ್ಳಾರಿ ಸೆಂಟ್ರಲ್ ಜೈಲಿಗೆ ಇಂದು ಬಳ್ಳಾರಿಯ ವಿಮ್ಸ್ ವೈದ್ಯರು ಅಲ್ಲಿರುವ 388 ಕೈದಿಗಳ ಆರೋಗ್ಯ ತಪಾಸಣೆ ನಡೆಸಲು ಅಗತ್ಯವಿರುವ ಸಾಮಗ್ರಿಗಳೊಂದಿಗೆ ಆಗಮಿಸಿದರು. ವಿಮ್ಸ್ ನಿಂದ ಹೌಸ್ ಸರ್ಜನ್​ಶಿಪ್ ನಲ್ಲಿರುವ ವೈದ್ಯರು ಮಾತ್ರ ಬಂದಂತಿದೆ, ನುರಿತ ಅಥವಾ ಪರಿಣಿತ ವೈದ್ಯರು ಬಂದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಎಂಟು ದಿನದಲ್ಲಿ ನಟ ದರ್ಶನ್ ಜೈಲಿನಲ್ಲಿ ಖರ್ಚು ಮಾಡಿದ ಹಣ ಎಷ್ಟು?

Follow us on