ದೇವರಿಗೆ ಕಣ್ಣಿಲ್ಲ ಎಂದು ದೂರುವ ಮುನ್ನ ಈ ಸ್ಟೋರಿ ನೋಡಿ ! ಭಗವಂತನ ಅನುಗ್ರಹ ಪಡೆಯಲು ಬೇಕಿಲ್ಲ ವಿಶೇಷ ಯೋಗ್ಯತೆ

Updated on: Apr 23, 2026 | 7:28 AM

"ದೇವರಿಗೆ ಕಣ್ಣಿಲ್ಲವಾ" ಎಂಬ ಲೋಕರೂಢಿ ಮಾತು ಅತೀವ ನೋವು, ಅಸಹಾಯಕತೆ ಮತ್ತು ಅನ್ಯಾಯಕ್ಕೆ ಒಳಗಾದಾಗ ಮನದಾಳದಿಂದ ಬರುತ್ತದೆ. ಇದು ಕೇವಲ ಒಂದು ಮಾತಿಗಿಂತ ಹೆಚ್ಚಾಗಿ, ಭಾವನೆಯ ತೀವ್ರತೆಯಿಂದ ಕೂಡಿದ ಪ್ರಬಲ ಪ್ರಾರ್ಥನೆಯಾಗಿದ್ದು, ತಕ್ಷಣವೇ ಭಗವಂತನ ಅನುಗ್ರಹವನ್ನು ತರುತ್ತದೆ. ದ್ರೌಪದಿಯ ಉದಾಹರಣೆ ಈ ಸತ್ಯಕ್ಕೆ ಸಾಕ್ಷಿ.

ಬೆಂಗಳೂರು. ಏ.23: ನಮ್ಮ ದೈನಂದಿನ ಜೀವನದಲ್ಲಿ ಕೇಳುವ ನುಡಿಗಳ ಹಿಂದಿರುವ ಆಳವಾದ ತತ್ವಗಳನ್ನು ಅನಾವರಣಗೊಳಿಸುತ್ತದೆ. “ದೇವರಿಗೆ ಕಣ್ಣಿಲ್ಲವಾ” ಎಂಬ ಲೋಕರೂಢಿ ಮಾತು ಇಂತಹ ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಮಾತನ್ನು ನಾವು ಯಾವಾಗಲು ನೋವು, ಅಸಹಾಯಕತೆ, ಅಥವಾ ಅನ್ಯಾಯಕ್ಕೆ ಒಳಗಾದಾಗ, ಮನದಾಳದಿಂದ ಹೊರಡುವ ಭಾವನಾತ್ಮಕ ಅಭಿವ್ಯಕ್ತಿಯಾಗಿ ಬಳಸುತ್ತೇವೆ. ಇದು ಕೇವಲ ಒಂದು ವಾಕ್ಯವಲ್ಲ, ಬದಲಿಗೆ ಯಾವ ಜಪ, ತಪ, ಪೂಜೆ ಇಲ್ಲದೆ, ಹೃದಯದಿಂದ ಹೊರಹೊಮ್ಮುವ ತೀವ್ರವಾದ ಭಾವನೆಯನ್ನು ಪ್ರತಿನಿಧಿಸುತ್ತದೆ. ಸಂಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಿಂದಲೂ ಕುಗ್ಗಿ ಹೋದಾಗ, ನ್ಯಾಯಯುತವಾಗಿ ನಡೆದುಕೊಂಡಿದ್ದರೂ ಕಷ್ಟಗಳು ಬಂದಾಗ ಈ ಮಾತು ಬರುತ್ತದೆ. ಈ ವಾಕ್ಯಶಕ್ತಿಗೆ ಯಾವುದೇ ವಿಶೇಷ ಯೋಗ್ಯತೆ, ಮಹನೀಯತೆ ಅಥವಾ ತಪಸ್ವಿಯ ಸ್ಥಾನ ಅಗತ್ಯವಿಲ್ಲ. ಸಾಮಾನ್ಯ ಮನುಷ್ಯರ ನೈಜ ಅಳಲು ಇದು. ಈ ಮಾತನ್ನು ಉಚ್ಚರಿಸಿದಾಗ ಭಗವಂತನ ಅನುಗ್ರಹವು ತಕ್ಷಣವೇ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us