AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಹೊಸ್ತಿಲಿಗೆ ಅರಿಶಿಣ ಹಚ್ಚುವುದರ ಹಿಂದಿನ ರಹಸ್ಯ

Daily Devotional: ಹೊಸ್ತಿಲಿಗೆ ಅರಿಶಿಣ ಹಚ್ಚುವುದರ ಹಿಂದಿನ ರಹಸ್ಯ

ವಿವೇಕ ಬಿರಾದಾರ
|

Updated on: May 20, 2024 | 6:42 AM

Share

ಭಾರತೀಯ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಅಂಗಳ ಗುಡಿಸಿ, ರಂಗೋಲಿ ಹಾಕುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದೆ. ಅದೇ ರೀತಿಯಾಗಿ ಮನೆಯ ಹೊಸ್ತಿಲನ್ನು ಸ್ವಚ್ಛಗೊಳಿಸಿ, ಅದಕ್ಕೆ ಅರಿಶಿಣ ಮತ್ತು ಕುಂಕುಮ ಹಚ್ಚುತ್ತಾರೆ. ಇನ್ನೂ ಕೆಲವರು ಹೊಸ್ತಿಲಿನ ಮೇಲೆ ಹೂವು ಇಟ್ಟು, ಪೂಜಿಸುತ್ತಾರೆ. ಹಾಗಿದ್ದರೆ ಹೊಸ್ತಿಲಿಗೆ ಏಕೆ ಅರಿಶಿಣ ಹಚ್ಚಬೇಕು? ಈ ವಿಡಿಯೋ ನೋಡಿ

ಭಾರತೀಯ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಅಂಗಳ ಗುಡಿಸಿ, ರಂಗೋಲಿ ಹಾಕುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ದತಿಯಾಗಿದೆ. ಅದೇ ರೀತಿಯಾಗಿ ಮನೆಯ ಹೊಸ್ತಿಲನ್ನು ಸ್ವಚ್ಛಗೊಳಿಸಿ, ಅದಕ್ಕೆ ಅರಿಶಿಣ ಮತ್ತು ಕುಂಕುಮ ಹಚ್ಚುತ್ತಾರೆ. ಇನ್ನೂ ಕೆಲವರು ಹೊಸ್ತಿಲಿನ ಮೇಲೆ ಹೂವು ಇಟ್ಟು, ಪೂಜಿಸುತ್ತಾರೆ. ಹಾಗಿದ್ದರೆ ಹೊಸ್ತಿಲಿಗೆ ಏಕೆ ಅರಿಶಿಣ ಹಚ್ಚಬೇಕು? ಮನೆಯ ಹೊಸ್ತಿಲು ಲಕ್ಷ್ಮೀ ದೇವಿಯ ವಾಸ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ವಾರಕ್ಕೊಮ್ಮೆ ಮುಖ್ಯದ್ವಾರದ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡುವುದು ತುಂಬಾ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ ಪರ್ವದಿನಗಳಲಾದರೂ ಹೊಸಿಲಿಗೆ ಅರಿಶಿಣ ಹಚ್ಚಿ ಕುಂಕುಮ ಬೊಟ್ಟು ಇಡಬೇಕು.ಏಕೆಂದರೆ ಆ ರೀತಿ ಮಾಡುವುದು ಲಕ್ಷ್ಮಿಪ್ರದ. ದುಷ್ಟಶಕ್ತಿಗಳು ಮನೆಯ ಒಳಗೆ ಬರಲ್ಲ.

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Read More