ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಬಸ್​ಗಳೇ ಇಲ್ಲ: ನೂರಾರು ಪ್ರಯಾಣಿಕರು ಪರದಾಟ

Edited By:

Updated on: Feb 24, 2024 | 7:42 PM

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೆ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ.

ಧಾರವಾಡ, ಫೆಬ್ರವರಿ 24: ಭಾರತ ಹುಣ್ಣಿಮೆ ಎಫೆಕ್ಟ್ ಹಿನ್ನೆಲೆ ಬಸ್ ಇಲ್ಲದೆ ಜನರು ಪರದಾಡಿದ್ದಾರೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ (Savadatti) ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೇ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ. ಬಂದ ಮೂರ್ನಾಲ್ಕು ಬಸ್​ಗಳು ಪುಲ್ ಆಗಿವೆ. ಒಂದು ಬಸ್​​ಲ್ಲಿ 100 ರಿಂದ 120 ಪ್ರಯಾಣಿಕರಿರುತ್ತಾರೆ. ಭಾರತ ಹುಣ್ಣಿಮೆ ಇದೆ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಜನ ಬರುತ್ತಾರೆ. ಹಾಗಾಗಿ ವ್ಯವಸ್ಥೆ ಮಾಡಬೇಕು ಅನ್ನುವ ಮುಂಜಾಗ್ರತೆ ಸಾರಿಗೆ ಸಂಸ್ಥೆ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us