‘ಅಷ್ಟು ಇಷ್ಟು ಅಂತ ಹೇಳಿಲ್ಲ’: ಯಶ್​ ಕೊಟ್ಟ ಭರವಸೆ ಬಗ್ಗೆ ಮೃತರ ಕುಟುಂಬದವರ ಮಾತು

| Updated By: ಮದನ್​ ಕುಮಾರ್​

Updated on: Jan 08, 2024 | 9:28 PM

ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ಯಶ್ ಅವರು ಸಾಂತ್ವನ ಹೇಳಿದ್ದಾರೆ. ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ಅವರ ಕುಟುಂಬದವರಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್​ ಭರವಸೆ ನೀಡಿದ್ದಾರೆ. ಈ ಕುರಿತು ಕುಟುಂಬದವರು ‘ಟಿವಿ9’ ಜೊತೆ ಮಾತನಾಡಿದ್ದಾರೆ.

ಬ್ಯಾನರ್​ ಕಟ್ಟುವಾಗ ವಿದ್ಯುತ್​ ತಗುಲಿ ನಿಧನರಾದ ಅಭಿಮಾನಿಗಳ (Yash Fans) ಕುಟುಂಬದವರನ್ನು ಯಶ್​ ಭೇಟಿ ಆಗಿದ್ದಾರೆ. ಮೃತ ಯುವಕರ ತಂದೆ-ತಾಯಿ ಹಾಗೂ ಮನೆಯ ಇತರೆ ಸದಸ್ಯರ ಜೊತೆ ಯಶ್​ ಮಾತನಾಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ಅವರು ಸಾಂತ್ವನ ಹೇಳಿದ್ದಾರೆ. ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ಅವರ ಕುಟುಂಬದವರಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್​ (Yash) ಭರವಸೆ ನೀಡಿದ್ದಾರೆ. ಈ ಕುರಿತು ಕುಟುಂಬದವರು ‘ಟಿವಿ9’ ಜೊತೆ ಮಾತನಾಡಿದ್ದಾರೆ. ‘ಪರಿಹಾರದ ಬಗ್ಗೆ ಸ್ಪಷ್ಟವಾಗಿ ಇಷ್ಟು, ಅಷ್ಟು ಅಂತ ಅವರು ಹೇಳಿಲ್ಲ. ನಿಮ್ಮ ನೋವಿಗೆ ಸ್ಪಂದಿಸುತ್ತೇನೆ, ಕೈಲಾದ ಸಹಾಯ ಮಾಡುತ್ತೇನೆ ಅಂತ ಹೇಳಿದ್ದಾರೆ’ ಎಂದು ಮುರಳಿ ಕುಟುಂಬದರು ತಿಳಿಸಿದ್ದಾರೆ. ಯಶ್​ ಅವರನ್ನು ನೋಡಲು ಗದಗ ಜಿಲ್ಲೆಯ ಸೊರಣಗಿ ಗ್ರಾಮದಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on