ಮೃತ ಅಭಿಮಾನಿ ನವೀನ್ ಫ್ಯಾಮಿಲಿಗೆ ನಟ ಯಶ್ ಹೇಳಿದ್ದೇನು?
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ನಟ ಯಶ್ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ನವೀನ್ ಅವರ ಕುಟುಂಬಸ್ಥರೊಂದಿಗೆ ಮಾತನಾಡಿರುವ ನಟ ಯಶ್, ‘ನಮಗೂ ಕೂಡ ಘಟನೆಯ ಬಗ್ಗೆ ದುಃಖವಿದೆ. ನಮ್ಮ ಮನೆಯಲ್ಲಿ ಒಬ್ಬನೆಂದು ಭಾವಿಸುತ್ತೇವೆ. ಅವರ ಹುಚ್ಚು ಪ್ರೀತಿ ಹೀಗೆ ಮಾಡಿಸಿದೆ’ ಎಂದಿದ್ದಾರೆ.
ಗದಗ, ಜನವರಿ 08: ಪ್ಯಾನ್ ಇಂಡಿಯಾ ನಾಯಕ ನಟ, ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ (Yash) ಅವರು ಇಂದು 38 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಟಾರ್ ಜನ್ಮದಿನ ಸಂಭ್ರಮದಲ್ಲಿ ಇರುವಾಗಲೇ ಘೋರವೇ ನಡೆದು ಹೋಗಿದೆ. ಮೂವರು ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ನಟ ಯಶ್ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ನವೀನ್ ಅವರ ಕುಟುಂಬಸ್ಥರೊಂದಿಗೆ ಮಾತನಾಡಿರುವ ನಟ ಯಶ್, ‘ನಮಗೂ ಕೂಡ ಘಟನೆಯ ಬಗ್ಗೆ ದುಃಖವಿದೆ. ನಮ್ಮ ಮನೆಯಲ್ಲಿ ಒಬ್ಬನೆಂದು ಭಾವಿಸುತ್ತೇವೆ. ಅವರ ಹುಚ್ಚು ಪ್ರೀತಿ ಹೀಗೆ ಮಾಡಿಸಿದೆ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
