ಮೃತ ಅಭಿಮಾನಿ ನವೀನ್​​ ಫ್ಯಾಮಿಲಿಗೆ ನಟ ಯಶ್​ ಹೇಳಿದ್ದೇನು?

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ನಟ ಯಶ್​ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ನವೀನ್ ಅವರ ಕುಟುಂಬಸ್ಥರೊಂದಿಗೆ ಮಾತನಾಡಿರುವ ನಟ ಯಶ್​, ‘ನಮಗೂ ಕೂಡ ಘಟನೆಯ ಬಗ್ಗೆ ದುಃಖವಿದೆ. ನಮ್ಮ ಮನೆಯಲ್ಲಿ ಒಬ್ಬನೆಂದು ಭಾವಿಸುತ್ತೇವೆ. ಅವರ ಹುಚ್ಚು ಪ್ರೀತಿ ಹೀಗೆ ಮಾಡಿಸಿದೆ’ ಎಂದಿದ್ದಾರೆ. 

ಮೃತ ಅಭಿಮಾನಿ ನವೀನ್​​ ಫ್ಯಾಮಿಲಿಗೆ ನಟ ಯಶ್​ ಹೇಳಿದ್ದೇನು?
| Updated By: ಗಂಗಾಧರ​ ಬ. ಸಾಬೋಜಿ

Updated on: Jan 08, 2024 | 8:54 PM

ಗದಗ, ಜನವರಿ 08: ಪ್ಯಾನ್‌ ಇಂಡಿಯಾ ನಾಯಕ ನಟ, ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್​ ಯಶ್ (Yash) ​ ಅವರು ಇಂದು 38 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಟಾರ್‌ ಜನ್ಮದಿನ ಸಂಭ್ರಮದಲ್ಲಿ ಇರುವಾಗಲೇ ಘೋರವೇ ನಡೆದು ಹೋಗಿದೆ. ಮೂವರು ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ನಟ ಯಶ್​ ಮೂವರು ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ನವೀನ್ ಅವರ ಕುಟುಂಬಸ್ಥರೊಂದಿಗೆ ಮಾತನಾಡಿರುವ ನಟ ಯಶ್​, ‘ನಮಗೂ ಕೂಡ ಘಟನೆಯ ಬಗ್ಗೆ ದುಃಖವಿದೆ. ನಮ್ಮ ಮನೆಯಲ್ಲಿ ಒಬ್ಬನೆಂದು ಭಾವಿಸುತ್ತೇವೆ. ಅವರ ಹುಚ್ಚು ಪ್ರೀತಿ ಹೀಗೆ ಮಾಡಿಸಿದೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us