ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಅದು ದಕ್ಕುತ್ತದೆ: ಸಿಟಿ ರವಿ, ಮಾಜಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2023 | 7:21 PM

ಸುಳ್ಯದಲ್ಲಿ ಭಾಗೀರತಿ ಅನ್ನುವವರಿಗೆ ಟಿಕೆಟ್ ಸಿಕ್ಕಿತ್ತು, ಟಿಕೆಟ್ ಪಡೆಯುವಾಗ ಅವರ ಖಾತೆಯಲ್ಲಿ ಕೆಲವೇ ಸಾವಿರಗಳಷ್ಟು ಹಣವಿತ್ತು. ಮೋಸ ಮಾಡುವವರು ಗೊವಿಂದ ಬಾಬು ಪೂಜಾರಿಯಂಥ ಬಲಿ ಕಾ ಬಕ್ರಾಗಳಿಗಾಗಿ ಕಾಯುತ್ತಿರುತ್ತಾರೆ. ಅವರಂಥ ಅಮಾಯಕರು ಸುಲಭವಾಗಿ ಖೆಡ್ಡಾಗೆ ಬೀಳುತ್ತಾರೆ ಎಂದು ರವಿ ಹೇಳಿದರು.

ಉಡುಪಿ: ಬಿಜೆಪಿಯಲ್ಲಿ ದುಡ್ಡು ಕೊಟ್ರೆ ಟಿಕೆಟ್ ಸಿಗುತ್ತದೆ ಅಂತ ಭಾವಿಸೋದು ತಪ್ಪು, ನಮ್ಮ ಪಕ್ಷದಲ್ಲಿ ಟಿಕೆಟ್ ಗಳು ಮಾರಾಟದ ಸರಕಲ್ಲ, ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುವವರಿಗೆ ಮಾತ್ರ ಟಿಕೆಟ್ ಸಿಗುತ್ತದೆ, ಟಿಕೆಟ್ ಮಾರಾಟಕ್ಕಿದೆ ಅಂತ ಹೇಳಿ ಯಾರಾದರೂ ನಂಬಿಸುವ ಪ್ರಯತ್ನ ಮಾಡಿದರೆ ನಂಬಿ ಮೋಸಹೋಗಬೇಡಿ ಅಂತ ಮಾಧ್ಯಮಗಳ ಮೂಲಕ ಹೇಳಬಯಸುತ್ತೇನೆ ಅಂತ ಮಾಜಿ ಶಾಸಕ ಸಿಟಿ ರವಿ (CT Ravi) ಹೇಳಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರವಿ, ತಮ್ಮ ಪಕ್ಷದಲ್ಲಿ ಟಿಕೆಟ್ ಮಾರಾಟವಾಗುತ್ತವೆ ಅನ್ನೋದೇ ನಿಜವಾಗಿದ್ದರೆ ಬೈಂದೂರು ವಿಧಾನ ಸಭಾ ಕ್ಷೇತ್ರದಿಂದ (Byndoor) ಗೋವಿಂದ ಬಾಬು ಪೂಜಾರಿಗೆ (Govind Babu Pujari) ಟಿಕೆಟ್ ಸಿಗುತ್ತಿತ್ತು. ಅದರೆ ಸಿಕ್ಕಿದ್ದು, ಬೇರೆಯವರಿಗೆ. ಹಾಗೆಯೇ, ಸುಳ್ಯದಲ್ಲಿ ಭಾಗೀರತಿ (Bhagirathi) ಅನ್ನುವವರಿಗೆ ಟಿಕೆಟ್ ಸಿಕ್ಕಿತ್ತು, ಟಿಕೆಟ್ ಪಡೆಯುವಾಗ ಅವರ ಖಾತೆಯಲ್ಲಿ ಕೆಲವೇ ಸಾವಿರಗಳಷ್ಟು ಹಣವಿತ್ತು. ಮೋಸ ಮಾಡುವವರು ಗೊವಿಂದ ಬಾಬು ಪೂಜಾರಿಯಂಥ ಬಲಿ ಕಾ ಬಕ್ರಾಗಳಿಗಾಗಿ ಕಾಯುತ್ತಿರುತ್ತಾರೆ. ಅವರಂಥ ಅಮಾಯಕರು ಸುಲಭವಾಗಿ ಖೆಡ್ಡಾಗೆ ಬೀಳುತ್ತಾರೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.