ನಗರದಲ್ಲಿ ಸುರಿದ ಮಳೆಗೆ ಎರಡು ಮರಗಳ ಕೊಂಬೆಗಳುನ ಕಟ್ ಆಗಿ ನೆಲಕ್ಕೆ, ಯಾವುದೇ ಅಪಾಯವಿಲ್ಲ
ಮರಗಳ ಗಣತಿ ಅಂತ ನಾವು ಹೇಳೋದು ಅವುಗಳ ಎಣಿಕೆ ಅಲ್ಲ, ನಗರದಲ್ಲರುವ ಅನೇಕ ಮರಗಳು ಮುಪ್ಪಿನ ಪ್ರಾಯ ತಲುಪಿವೆ ಮತ್ತು ಅವು ಯಾವುದೇ ಸಮಯ ಉರುಳಬಹುದು. ಬಿಬಿಎಂಪಿ ಸಿಬ್ಬಂದಿ ಅಂಥ ಮರಗಳನ್ನು ಮಳೆಗಾಲು ಶುರುವಾಗುವ ಮೊದಲು ಪತ್ತೆ ಮಾಡಿ ಕಡಿದು ಹಾಕಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಮಳೆಗಾಲ ಶುರುವಾಗಲು ಇನ್ನು ಕೇವಲ ಮೂರ್ನಾಲ್ಕು ವಾರಗಳ ಸಮಯ ಮಾತ್ರ ಉಳಿದಿದೆ.
ಬೆಂಗಳೂರು, ಮೇ 13: ಬೆಂಗಳೂರಿಗೆ ಜಾತಿ ಗಣತಿ ಮತ್ತು ಜನಗಣತಿಯ (Census) ಅವಶ್ಯಕತೆ ಇದೆಯೋ ಇಲ್ವೋ ಗೊತ್ತಿಲ್ಲ ಮಾರಾಯ್ರೇ, ಆದರೆ ಮರ ಗಣತಿಯ ಜರೂರತ್ತು ನಿಶ್ವಯವಾಗಿಯೂ ಇದೆ. ಇಲ್ನೋಡಿ ನಗರದಲ್ಲಿ ಇಂದು ಸುರಿದ ಭಾರೀ ಮಳೆಗೆ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ಮತ್ತು ಕಾವೇರಿ ಜಂಕ್ಷನ್ ಬಳಿಯ ಮರಗಳ ಕೊಂಬೆ ಮುರಿದು ನೆಲಕ್ಕುರುಳಿವೆ. ಅದೃಷ್ಟವಶಾತ್ ಜನರಿಗಾಗಲೀ, ವಾಹನಗಳಿಗಾಗಲೀ ಸಮಸ್ಯೆ ಅಗಿಲ್ಲ. ಅದರೆ ಇದು ಬಿಬಿಎಂಪಿಗೆ ಎಚ್ಚರಿಕೆಯ ಗಂಟೆ, ಮಾನ್ಸೂನ್ ಇನ್ನು ಶುರುವಾಗಬೇಕಿದೆ, ಒಂದು ಮಳೆಗೆ ನಗರದ ಸ್ಥಿತಿ ಹೀಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos